ಪಾಟ್ನಾ: ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಕಾವು ಏರುತ್ತಿರುವಂತೆ ರಾಜಕೀಯ ಕೆಸರೆರೆಚಾಟಗಳೂ ಎಗ್ಗಿಲ್ಲದೆ ನಡೆಯುತ್ತಿವೆ. ಬಿಜೆಪಿಯ ವಿರುದ್ಧ ಸಮರ ಸಾರಿರುವ ಮಹಾಮೈತ್ರಿಯ ಮುಖಂಡರುಗಳಾದ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರು ನೇರವಾಗಿ ಪ್ರಧಾನಿಯನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.
ಈಗಾಗಲೇ ನರೇಂದ್ರ ಮೋದಿಯವರನ್ನು ನರಭಕ್ಷಕ, ಗಾಂಧಿ ಹಂತಕ ಎಂದೆಲ್ಲಾ ಜರಿದಿರುವ ಲಾಲೂ ಪ್ರಸಾದ್ ಇಂದು ಅವರನ್ನು ಧೃತರಾಷ್ಟ್ರ ಎಂದು ಕರೆದಿದ್ದಾರೆ.
’ಹಸ್ತಿನಾಪುರದಲ್ಲಿ ಕುಳಿತಿರುವ ಧೃತರಾಷ್ಟ್ರ(ಮೋದಿ) ಕೇವಲ ಕುರುಡ ಮಾತ್ರ ಅಲ್ಲ, ಕಿವುಡ ಮತ್ತು ಮೂಕನೂ ಹೌದು. ಬಿಜೆಪಿ ನಾಯಕರುಗಳು ದೇಶದಲ್ಲಿ ಅರಾಜಕತೆ ನಡೆಸಲು ಮುಕ್ತರಾಗಿದ್ದಾರೆ. ಈ ಧೃತರಾಷ್ಟ್ರ ಹೆದರಿಕೊಂಡಿದ್ದಾನೆ. ಆತ ಕೇವಲ ಬೊಬ್ಬಿಡುತ್ತಾನೆ ಆದರೆ ಅಗತ್ಯವಿರುವಾಗ ಮೌನಕ್ಕೆ ಜಾರುತ್ತಾನೆ’ ಎಂದಿದ್ದಾರೆ.
ಅಲ್ಲದೇ ಹೊರಗಿನವರು ಬಂದು ಬಿಹಾರವನ್ನು ಆಳಲು ಬಿಡುವುದಿಲ್ಲ. ಲಾಲೂ ಮತ್ತು ನಿತೀಶ್ಗಿಂತ ಚೆನ್ನಾಗಿ ಬಿಹಾರವನ್ನು ಅರಿತವರಿದ್ದಾರೆಯೇ? ಗುಜರಾತಿಗರು ಬಿಹಾರವನ್ನು ನಾಶ ಮಾಡಲು ಬಿಡುವುದಿಲ್ಲ ಎಂದು ಲಾಲೂ ಟ್ವೀಟ್ ಮಾಡಿದ್ದಾರೆ.
ಅವರ ಈ ಹೇಳಿಕೆಗಳಿಗೆ ಬಿಜೆಪಿ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.