ತಿರುವನಂತಪುರಂ: ಮೋದಿ ಸರ್ಕಾರ ಜಾರಿಗೆ ತಂದ ತ್ರಿವಳಿ ತಲಾಖ್ ವಿರುದ್ಧದ ಕಾನೂನನ್ನು ಪ್ರಶ್ನಿಸಿದ್ದಕ್ಕಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಕೇರಳ ರಾಜ್ಯಪಾಲ್ ಆರಿಫ್ ಮೊಹಮ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ. ತ್ರಿವಳಿ ತಲಾಖ್ ಅನ್ನು ಕುರಾನ್ನಲ್ಲಿಯೂ ಸಹ ಉಲ್ಲೇಖಿಸಲಾಗಿಲ್ಲ ಎಂದಿದ್ದಾರೆ.
ತ್ರಿವಳಿ ತಲಾಖ್ ಕಾನೂನಿನ ಬಗ್ಗೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದ ಪಿನರಾಯಿ, “ಎಲ್ಲಾ ಧರ್ಮಗಳಲ್ಲಿ ವಿಚ್ಛೇದನಗಳು ನಡೆಯುತ್ತಿದ್ದರೂ, ತ್ರಿವಳಿ ತಲಾಖ್ ಅನ್ನು ಮಾತ್ರ ಅಪರಾಧೀಕರಿಸಲಾಗಿದೆ. ಇದು ಮುಸ್ಲಿಮರಿಗೆ ಮಾತ್ರ ಏಕೆ ಕ್ರಿಮಿನಲ್ ಅಪರಾಧ? ಎಲ್ಲಾ ಇತರ ವಿಚ್ಛೇದನ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಸಿವಿಲ್ ವಿಷಯಗಳಾಗಿ ನೋಡಲಾಗುತ್ತದೆ”ಎಂದಿದ್ದರು.
ಈ ಬಗ್ಗೆ ಮಾತನಾಡಿದ ಖಾನ್, “ಸಿಎಂ ಏನು ಹೇಳಿದರೂ ಅದು ಅವರ ಸ್ವಂತ ಅಭಿಪ್ರಾಯ. ಆದರೆ ತ್ರಿವಳಿ ತಲಾಖ್ ಈಗ ಸಮಸ್ಯೆಯಾಗಿಲ್ಲ, ಅದರ ವಿರುದ್ಧ ಕಾನೂನನ್ನು 2019 ರಲ್ಲಿ ಜಾರಿಗೆ ತರಲಾಯಿತು. ವಿಚ್ಛೇದನ ದರಗಳು ಶೇಕಡಾ 90 ಕ್ಕಿಂತ ಕಡಿಮೆಯಾಗಿದೆ. ಬಹಳಷ್ಟು ಮಹಿಳೆಯರು ಮತ್ತು ಮಕ್ಕಳ ಭವಿಷ್ಯ ಸುಭದ್ರವಾಗಿದೆ” ಎಂದಿದ್ದಾರೆ.
“ವಿಚ್ಛೇದನ ಎಲ್ಲೆಡೆ ಇದೆ, ಮುಸ್ಲಿಮರಲ್ಲೂ ಸಹ ಇದೆ. ಆದರೆ ತ್ರಿವಳಿ ತಲಾಖ್ ಅನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ ಮತ್ತು ಕುರಾನ್ನಲ್ಲಿ ತ್ರಿವಳಿ ತಲಾಖ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಾಗಾಗಿ ತ್ರಿವಳಿ ತಲಾಖ್ ಕುರಿತು ಕಾನೂನು ರಚನೆಯಾದಾಗ ವ್ಯಕ್ತಿಗೆ 40 ಛಡಿ ಏಟು ನೀಡುವ ಅವಕಾಶವನ್ನು ಮಾಡಲಾಯಿತು. ಅಂದಿನಿಂದ ಇದನ್ನು ಕ್ರಿಮಿನಲ್ ವಿಷಯವೆಂದು ಪರಿಗಣಿಸಲಾಗಿದೆ. ಆದರೆ ಇಂದಿನ ದಿನಗಳಲ್ಲಿ 40 ಛಡಿ ಏಟು ನೀಡಲು ಸಾಧ್ಯವಿಲ್ಲ, ಹಾಗಾಗಿ ಜೈಲು ಶಿಕ್ಷೆಗೆ ಅವಕಾಶವಿದೆ” ಎಂದರು.
Kerala governor slams Pinarayi Vijayan's remark, says Triple Talaq is mentioned nowhere, not even in Quran
Read @ANI Story | https://t.co/skcZBE51mJ#arifmohammadkhan #Quran #TripleTalaq pic.twitter.com/kmUB8PxTGa
— ANI Digital (@ani_digital) February 23, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.