ಅಹ್ಮದಾಬಾದ್: ಗುಜರಾತ್ನಲ್ಲಿ ಚುನಾವಣಾ ಆಯೋಗವು ಸೋಮನಾಥ ಜಿಲ್ಲೆಯ ಗಿರ್ ಅರಣ್ಯದಲ್ಲಿ ಒಬ್ಬ ಮತದಾದನಿಗಾಗಿ ಮತಗಟ್ಟೆಯನ್ನು ಸ್ಥಾಪಿಸಿದೆ.
ಗಿರ್ನ ದಟ್ಟ ಕಾಡಿನಲ್ಲಿರುವ ಬನೇಜ್ನಲ್ಲಿರುವ ಬಾಣೇಶ್ವರ ಮಹಾದೇವ ದೇವಸ್ಥಾನದ ಮಹಂತ್ ಹರಿದಾಸ್ ಉದಾಸೀನ್ಗಾಗಿ ಈ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಇದಲ್ಲದೇ ಗಿರ್ ಅರಣ್ಯ ಪ್ರದೇಶದಲ್ಲಿ ಬುಡಕಟ್ಟು ಮತದಾರರಿಗಾಗಿ ಇನ್ನೂ ಏಳು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮಹಂತ್ ಹರಿದಾಸ್ ಉನಾ ಕ್ಷೇತ್ರದ ಮತದಾರ. ಅವರ ಮತದಾನಕ್ಕಾಗಿ ಹತ್ತು ಜನರ ತಂಡವು 25 ಕಿಲೋಮೀಟರ್ಗಳಷ್ಟು ದೂರ ಕ್ರಮಿಸಿ ಮತಗಟ್ಟೆಯನ್ನು ತಲುಪುತ್ತಿದೆ. ದೇವಸ್ಥಾನದ ಬಳಿ ಇರುವ ಅರಣ್ಯ ಇಲಾಖೆ ಕಚೇರಿಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ.
ಲೋಕಸಭೆ ಮತ್ತು ಜಿಲ್ಲಾ ಪರಿಷತ್ ಚುನಾವಣೆಗೂ ಚುನಾವಣಾ ಆಯೋಗವೂ ಇಲ್ಲಿ ಬೂತ್ಗಳನ್ನು ಸ್ಥಾಪಿಸಿದೆ. ಈ ಹಿಂದೆ ಮಹಾಂತ್ ಹರಿದಾಸ್ ಅವರ ಗುರು ಭರತ್ ದಾಸ್ ಕೂಡ ಇಲ್ಲಿನ ಮತದಾರರಾಗಿದ್ದರು, ಈಗ ಅವರು ನಿಧನರಾಗಿದ್ದಾರೆ. ದಟ್ಟ ಅರಣ್ಯದಲ್ಲಿ ಮೊಬೈಲ್ ಫೋನ್ ಕೆಲಸ ಮಾಡುವುದಿಲ್ಲ, ಹೀಗಾಗಿ ಅರಣ್ಯ ಇಲಾಖೆಯ ವೈರ್ ಲೆಸ್ ವ್ಯವಸ್ಥೆಗಳನ್ನು ಬಳಸುತ್ತಿದೆ. ಕಾಡುಪ್ರಾಣಿಗಳ ಭಯದಿಂದ ಯಾವುದೇ ಪಕ್ಷದ ಅಭ್ಯರ್ಥಿ ಮಹಾಂತ್ ಹರಿದಾಸ್ ಅವರ ಬಳಿ ಪ್ರಚಾರಕ್ಕೆ ಬಂದಿಲ್ಲ. ಇದರ ಹೊರತಾಗಿಯೂ, ಮಹಂತ್ ಹರಿದಾಸ್ ಯಾವಾಗಲೂ ತಮ್ಮ ಮತದಾನದ ಹಕ್ಕನ್ನು ಬಳಸಿಕೊಂಡು ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.