ನವದೆಹಲಿ: ದ್ವೇಷದ ಭಾಷಣಗಳ ಕುರಿತು ಟಿವಿ ಚಾನೆಲ್ಗಳ ವಿರುದ್ಧ ಹರಿಹಾಯ್ದಿರುವ ಸುಪ್ರೀಂಕೋರ್ಟ್, ಆಂಕರ್ನ ಪಾತ್ರ ಬಹಳ ಮುಖ್ಯವಾದುದು ಎಂದಿದೆ. ಅಲ್ಲದೇ ಟಿವಿಯಲ್ಲಿ ಹರಡುತ್ತಿರುವ ದ್ವೇಷದ ಬಗ್ಗೆ ಸರ್ಕಾರವು ಮೂಕ ಪ್ರೇಕ್ಷಕನಾಗಿ ಉಳಿದಿರುವುದು ಯಾಕೆ ಎಂದು ಪ್ರಶ್ನಿಸಿದೆ.
“ಮುಖ್ಯವಾಹಿನಿಯ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿನ ದ್ವೇಷ ಭಾಷಣಗಳು ಅನಿಯಂತ್ರಿತವಾಗಿವೆ. ದ್ವೇಷದ ಭಾಷಣವು ಹರಡದಂತೆ ನೋಡಿಕೊಳ್ಳುವುದು ಆಂಕರ್ಗಳ ಕರ್ತವ್ಯವಾಗಿದೆ. ಪತ್ರಿಕಾ ಸ್ವಾತಂತ್ರ್ಯ ಮುಖ್ಯವಾಗಿದೆ. ಆದರೆ ನಾವು ಎಲ್ಲಿ ಗೆರೆ ಎಳೆಯಬೇಕು ಎಂಬುದು ತಿಳಿದಿರಬೇಕು’’ ಎಂದು ಕಳೆದ ವರ್ಷದಿಂದ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅಭಿಪ್ರಾಯಪಟ್ಟರು.
“ದ್ವೇಷದ ಭಾಷಣವು ಬಹು ಆಯಾಮದ್ದಾಗಿರುತ್ತದೆ. ಯಾರನ್ನಾದರೂ ಕೊಲ್ಲುವಂತೆ, ಬೇರೆ ಬೇರೆ ವಿಧಾನದಲ್ಲಿ ಮಾಡಬಹುದು. ಅವರು ಕೆಲವು ಕನ್ವಿಕ್ಷನ್ಗಳ ಆಧಾರದ ಮೇಲೆ ನಮ್ಮನ್ನು ಕೊಂಡಿಯಾಗಿರಿಸುತ್ತಾರೆ” ಎಂದು ನ್ಯಾಯಾಲಯ ಹೇಳಿದೆ. ದ್ವೇಷದ ಭಾಷಣವು ವೀಕ್ಷಕರಿಗೆ ಏಕೆ ಆಸಕ್ತಿ ನೀಡುತ್ತದೆ ಎಂಬುದಕ್ಕೆ ಅಚ್ಚರಿ ವ್ಯಕ್ತಪಡಿಸಿದೆ.
ದ್ವೇಷದ ಭಾಷಣವನ್ನು ತಡೆಯುವ ಕುರಿತು ಕಾನೂನು ಆಯೋಗದ ಶಿಫಾರಸುಗಳ ಮೇಲೆ ಕಾರ್ಯನಿರ್ವಹಿಸಲು ಉದ್ದೇಶಿಸಲಾಗಿದೆಯೇ ಎಂಬ ಬಗ್ಗೆ ಕೇಂದ್ರ ಸರ್ಕಾರವು ಸ್ಪಷ್ಟಪಡಿಸಬೇಕೆಂದು ನ್ಯಾಯಾಲಯವು ಹೇಳಿದೆ. ನವೆಂಬರ್ 23 ರಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.