News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸುಲಲಿತ ವ್ಯಾಪಾರ, ಸುಲಲಿತ ಜೀವನದಂತೆ ಸುಲಲಿತ ನ್ಯಾಯ ಕೂಡ ಅಗತ್ಯ: ಮೋದಿ

ನವದೆಹಲಿ: “ಸುಲಲಿತ ವ್ಯಾಪಾರ, ಸುಲಲಿತ ಜೀವನದಂತೆ ಸುಲಲಿತ ನ್ಯಾಯ ಕೂಡ ಅಗತ್ಯ” ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಇಂದು ನವದೆಹಲಿಯಲ್ಲಿ ನಡೆದ ಮೊದಲ ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಅಧಿಕಾರಿಗಳ ಸಭೆಯನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ತ್ವರಿತ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಮಹತ್ತರ ಪಾತ್ರ ವಹಿಸಬಹುದು ಎಂದು ಮೋದಿ ಹೇಳಿದರು.

ಕಾರ್ಯಕ್ರಮದಲ್ಲಿ ದೇಶದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ  ವೇದಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ ಉದಯ್ ಯು ಲಲಿತ್ ಮತ್ತು ಡಿವೈ ಚಂದ್ರಚೂಡ್, ಕಾನೂನು ಸಚಿವ ಕಿರಣ್ ರಿಜುಜು ಮತ್ತಿತರರು ಉಪಸ್ಥಿತರಿದ್ದರು.

“ನಮ್ಮ ನಿಜವಾದ ಶಕ್ತಿ ಯುವಕರಲ್ಲಿದೆ. ವಿಶ್ವದ 1/5ರಷ್ಟು ಯುವಕರು ಭಾರತದಲ್ಲಿ ವಾಸಿಸುತ್ತಿದ್ದಾರೆ. ನುರಿತ ಕೆಲಸಗಾರರ ಪೈಕಿ ನಮ್ಮ ಉದ್ಯೋಗಿಗಳ ಪ್ರಮಾಣ ಶೇಕಡಾ 3 ರಷ್ಟು ಮಾತ್ರ. ನಾವು ನಮ್ಮ ದೇಶದ ಕೌಶಲ್ಯ ಬಲವನ್ನು ಬಳಸಿಕೊಳ್ಳಬೇಕಾಗಿದೆ ಮತ್ತು ಭಾರತವು ಈಗ ಜಾಗತಿಕ ಅಂತರವನ್ನು ತುಂಬುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದರು.

“ಬಹುಪಾಲು ಜನರು ಅರಿವಿನ ಕೊರತೆಯಿಂದ ಮೌನವಾಗಿ ಬಳಲುತ್ತಿದ್ದಾರೆ ಮತ್ತು ಕಾನೂನು ನೆರವು, ನ್ಯಾಯದ ಪ್ರವೇಶವು ಸಾಮಾಜಿಕ ವಿಮೋಚನೆಯ ಸಾಧನವಾಗಿದೆ” ಎಂದು ಅವರು ಹೇಳಿದರು.

“ಇಂದು ನಾವು ನ್ಯಾಯದೊಂದಿಗೆ ಜನರ ಮನೆ ಬಾಗಿಲಿಗೆ ತಲುಪಲು ಸಾಧ್ಯವಾಗಿದೆ ಎಂದರೆ ಅದಕ್ಕೆ ನಾವು ಸಮರ್ಥ ನ್ಯಾಯಾಧೀಶರು, ಉತ್ಸಾಹಿ ವಕೀಲರು ಮತ್ತು ಸರ್ಕಾರಗಳಿಗೆ ಧನ್ಯವಾದ ಹೇಳಬೇಕು” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top