ನವದೆಹಲಿ: ಮಡಗಾಸ್ಕರ್ಗೆ ಮಾನವೀಯ ನೆರವಿನ ಭಾಗವಾಗಿ ಭಾರತವು 5,000 ಟನ್ ಅಕ್ಕಿಯನ್ನು ಪೂರೈಕೆ ಮಾಡುವುದಾಗಿ ಘೋಷಣೆ ಮಾಡಿದೆ.
ಮಡಗಾಸ್ಕರ್ ಮತ್ತು ಕೊಮೊರೊಸ್ನಲ್ಲಿರುವ ಭಾರತದ ರಾಯಭಾರಿ ಅಭಯ್ ಕುಮಾರ್ ಅವರು ಮಡಗಾಸ್ಕರ್ನ ಪ್ರಧಾನ ಮಂತ್ರಿ ಕ್ರಿಶ್ಚಿಯನ್ ಎನ್ಟ್ಸೆ ಅವರನ್ನು ಭೇಟಿ ಮಾಡಿದರು ಮತ್ತು ಮಾನವೀಯ ನೆರವಿಗಾಗಿ ಆ ದ್ವೀಪ ರಾಷ್ಟ್ರಕ್ಕೆ 5,000 ಟನ್ ಅಕ್ಕಿಯನ್ನು ದಾನ ಮಾಡುವುದಾಗಿ ಘೋಷಿಸಿದರು.
ಭಾರತದಿಂದ ಮಡಗಾಸ್ಕರ್ಗೆ ಸಾಗಣೆಯಾಗುವ ಅಕ್ಕಿಯು ಜುಲೈ 2022 ರಲ್ಲಿ ಮಲಗಾಸಿಯ ಟೊಮಾಸಿನಾ ಬಂದರನ್ನು ತಲುಪುವ ಸಾಧ್ಯತೆಯಿದೆ.
ಅಭಯ್ ಕುಮಾರ್ ಅವರು ಗುರುವಾರ ಮಡಗಾಸ್ಕರ್ ಪ್ರಧಾನಿ ಎನ್ಟ್ಸೆ ಅವರನ್ನು ಭೇಟಿಯಾದರು, ಅಲ್ಲಿ ಅವರು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು, ಮಡಗಾಸ್ಕರ್ನ ದಕ್ಷಿಣದಲ್ಲಿ ಬರಗಾಲದಿಂದ ಬಳಲುತ್ತಿರುವ ಜನರಿಗೆ ಭಾರತವು ಮಾರ್ಚ್ 2021 ರಲ್ಲಿ 1,000 ಮೆಟ್ರಿಕ್ ಟನ್ ಅಕ್ಕಿ ಮತ್ತು ಉತ್ತರ ಮಡಗಾಸ್ಕರ್ನ ಪ್ರವಾಹ ಸಂತ್ರಸ್ತರಿಗಾಗಿ ಮಾರ್ಚ್ 2020 ರಲ್ಲಿ 600 ಟನ್ ಅಕ್ಕಿಯನ್ನು ನೀಡಿತ್ತು.
ಇತ್ತೀಚೆಗೆ, ಭಾರತವು ಜೂನ್ 3, 2022 ರಂದು ವಿಶ್ವ ಬೈಸಿಕಲ್ ದಿನದ ಸಂದರ್ಭದಲ್ಲಿ ಮಡಗಾಸ್ಕರ್ಗೆ 15,000 ಬೈಸಿಕಲ್ಗಳನ್ನು ದೇಣಿಗೆ ನೀಡುವುದಾಗಿ ಘೋಷಿಸಿತು.
ಮಡಗಾಸ್ಕರ್ಗೆ ಸಂಬಂಧಿಸಿದ ಭಾರತದ ನೀತಿಯು ಕಡಲ ಸಹಕಾರ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.