ತಿರುವನಂತಪುರಂ: ಕೇರಳ ಮೂಲದ ಮುಸ್ಲಿಂ ಸಂಘಟನೆಯೊಂದು ಉಗ್ರ ಸಂಘಟನೆಗಳಾದ ಅಲ್ಖೈದಾ ಮತ್ತು ಇಸಿಸ್ ವಿರುದ್ಧ ಬೃಹತ್ ಆಂದೋಲವನ್ನು ಆರಂಭಿಸಿದೆ.
ಮುಸ್ಲಿಂ ಯುವಕರು ಭಯೋತ್ಪಾದನ ಸಂಘಟನೆಯತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿರುವುದನ್ನು ತಡೆಯಲು ಕೇರಳ ನಡ್ವತುಲ್ ಮುಜಾಹಿದ್ದೀನ್ ಎಂಬ ಸಂಘಟನೆ ಈ ಆಂದೋಲವನ್ನು ಆರಂಭಿಸಿದೆ.
ಇತ್ತೀಚಿಗೆ ಯುಎಇನಲ್ಲಿ ಕೇರಳ ಮೂಲದ ಇಬ್ಬರು ಯುವಕರು ಇಸಿಸ್ ಸೇರಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು. ಈ ರೀತಿಯಾದ ಹಲವಾರು ಪ್ರಕರಣಗಳು ಆಗಾಗ ನಡೆಯುತ್ತಿವೆ. ಸಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಉಗ್ರರು ತಮ್ಮತ್ತ ಆಕರ್ಷಿತರನ್ನಾಗಿಸುತ್ತಿದ್ದಾರೆ. ಹೀಗಾಗಿ ಇಂತಹ ಉಗ್ರ ಸಂಗಟನೆಗಳ ವಿರುದ್ಧ ಆಂದೋಲವನ್ನು ರೂಪಿಸಲಾಗಿದೆ.
‘ನಮ್ಮ ಆಂದೋಲನ ಮೂಲಭೂತವಾದಿತನ, ಕೋಮುವಾದ ಮತ್ತು ಯುವಕರ ನಡುವೆ ವ್ಯಾಪಿಸುತ್ತಿರುವ ಉಗ್ರ ಸಿದ್ಧಾಂತ ವಿರುದ್ಧವಾಗಿದೆ’ ಎಂದು ಸಂಘಟನೆ ಮುಖಂಡ ಅಬ್ದುಲ್ ಮಜೀದ್ ಸ್ವಲಾಹಿ ತಿಳಿಸಿದ್ದಾರೆ.
ಇಸಿಸ್ ವಿರುದ್ಧದ ಕರಪತ್ರಗಳನ್ನು ಇದು ಹಂಚುತ್ತಿದೆ, ಪ್ರವಾದಿ ಮೊಹಮ್ಮದ ಮಾನವೀಯ ತತ್ವಗಳನ್ನು ಎತ್ತಿಹಿಡಿಯಲು ಈ ಸಂಘಟನೆ ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.