ನವದೆಹಲಿ: ಇರಾನ್ ಮತ್ತು ವೆನೆಜುವೆಲಾ ಸೇರಿದಂತೆ ಭಾರತಕ್ಕೆ ಈ ಹಿಂದೆ ಪ್ರವೇಶಿಸುತ್ತಿದ್ದ ತೈಲದ ಪ್ರತಿಯೊಂದು ಮೂಲವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಹಿಂಡಿವೆ. ಉಕ್ರೇನ್ ಸಂಘರ್ಷದ ಹೊರತಾಗಿಯೂ ಯುರೋಪ್ ರಾಷ್ಟ್ರಗಳು ರಷ್ಯಾದ ಅನಿಲವನ್ನು ಖರೀದಿಸುವುದನ್ನು ಮುಂದುವರೆಸಿವೆ, ಹೀಗಿರುವಾಗ ಭಾರತವು ಸ್ಪರ್ಧಾತ್ಮಕವಾಗಿ ತೈಲವನ್ನು ಖರೀದಿಸಬಾರದು ಎಂಬುದಕ್ಕೆ ಯಾವುದೇ ಕಾರಣವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶುಕ್ರವಾರ ಹೇಳಿದ್ದಾರೆ.
ಸ್ಲೋವಾಕ್ ರಾಜಧಾನಿ ಬ್ರಾಟಿಸ್ಲಾವಾಗೆ ಅಧಿಕೃತ ಭೇಟಿ ನೀಡಿರುವ ಅವರು, ಅಲ್ಲಿ ಗ್ಲೋಬ್ಸೆಕ್ 2022 ಫೋರಂನಲ್ಲಿ ಸಂದರ್ಶನದಲ್ಲಿ ಮಾತನಾಡಿದರು.
“ಯುರೋಪಿನ ಸಮಸ್ಯೆಗಳು ಪ್ರಪಂಚದ ಸಮಸ್ಯೆಗಳು ಆದರೆ ಪ್ರಪಂಚದ ಸಮಸ್ಯೆಗಳು ಯುರೋಪಿನ ಸಮಸ್ಯೆಗಳಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಬೇಕು” ಎಂದಿದ್ದಾರೆ.
ಪಾಶ್ಚಿಮಾತ್ಯ ಗುಂಪು ಮತ್ತು ರಷ್ಯಾ-ಚೀನಾ ಗುಂಪುಗಳ ನಡುವೆ ಆಯ್ಕೆಯನ್ನ ಭಾರತ ಸ್ವೀಕರಿಸುವುದಿಲ್ಲ, ಕೂಲಂಕುಷವಾಗಿ ಪರಿಶೀಲಿಸಿ ಬಳಿಕ ತನ್ನದೇ ಆದ ಆಯ್ಕೆಗಳನ್ನು ಮಾಡಲು ಭಾರತವು ಅರ್ಹವಾಗಿದೆ ಎಂದಿದ್ದಾರೆ.
“ನಮ್ಮ ಮೌಲ್ಯಗಳು ಮತ್ತು ನಮ್ಮ ಆಸಕ್ತಿಗಳಲ್ಲಿ ಸಮತೋಲನ ಇರುತ್ತದೆ. ಜಗತ್ತಿನ ಯಾವ ದೇಶವೂ ತನ್ನ ಹಿತಾಸಕ್ತಿಗಳನ್ನು ಕಡೆಗಣಿಸುವುದಿಲ್ಲ. ಪ್ರಪಂಚವು ಹಿಂದೆ ಇದ್ದಂತೆ ಯುರೋಸೆಂಟ್ರಿಕ್ ಆಗಲು ಸಾಧ್ಯವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.