ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾ ಅಕ್ಷರಶಃ ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ. ಇಲ್ಲಿ ಬಹುತೇಕ ಎಲ್ಲಾ ಅಗತ್ಯ ವಸ್ತುಗಳಿಗೂ ಕೊರತೆ ಉದ್ಭವಿಸಿದೆ. ಅದರ ಖಾಲಿಯಾದ ವಿದೇಶಿ ಮೀಸಲು ಮತ್ತು ಆಹಾರ ಆಮದುಗಳನ್ನು ಮರು ನಿರ್ಮಿಸಲು ಭಾರತವು ಶ್ರೀಲಂಕಾಕ್ಕೆ ಯುಎಸ್ಡಿ 900 ಮಿಲಿಯನ್ ಸಾಲವನ್ನು ಘೋಷಿಸಿದೆ.
ಬುಧವಾರ, ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್ನ ಗವರ್ನರ್ ಅಜಿತ್ ನಿವಾರ್ಡ್ ಕಬ್ರಾಲ್ ಅವರು ಸರಕುಗಳನ್ನು ಆಮದು ಮಾಡಿಕೊಳ್ಳಲು ಶ್ರೀಲಂಕಾ ಭಾರತದಿಂದ ಯುಎಸ್ಡಿ ಒಂದು ಬಿಲಿಯನ್ ಸಾಲದ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಶ್ರೀಲಂಕಾದ ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೇ ಅವರು ಗುರುವಾರ ಕಬ್ರಾಲ್ ಅವರನ್ನು ಭೇಟಿ ಮಾಡಿದ್ದಾರೆ. ಆರ್ಬಿಐ ಯುಎಸ್ಡಿ 900 ಮಿಲಿಯನ್ ಸೌಲಭ್ಯಗಳನ್ನು ವಿಸ್ತರಿಸಿದ ಹಿನ್ನೆಲೆಯಲ್ಲಿ ಶ್ರೀಲಂಕಾಕ್ಕೆ ಭಾರತದ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ
ಭಾರತದೊಂದಿಗೆ ಬಿಲಿಯನ್ ಡಾಲರ್ ಸಾಲದ ಮಾತುಕತೆಗಳು ಅದರ ಮುಂದುವರಿದ ಹಂತವನ್ನು ತಲುಪಿವೆ ಎಂದು ಕಬ್ರಾಲ್ ಬುಧವಾರ ಹೇಳಿದ್ದಾರೆ.
ಆಮದುಗಳಿಗೆ ಪಾವತಿಸಲು ಡಾಲರ್ಗಳ ಕೊರತೆಯಿಂದಾಗಿ ಶ್ರೀಲಂಕಾ ಪ್ರಸ್ತುತ ಎಲ್ಲಾ ಅಗತ್ಯ ವಸ್ತುಗಳ ಕೊರತೆಯನ್ನು ಅನುಭವಿಸುತ್ತಿದೆ. ಅಲ್ಲದೇ ವಿದ್ಯುತ್ ಘಟಕವು ಟರ್ಬೈನ್ಗಳನ್ನು ಚಲಾಯಿಸಲು ಇಂಧನವನ್ನು ಪಡೆಯಲು ಸಾಧ್ಯವಾಗದ ಕಾರಣ ಗರಿಷ್ಠ ಸಮಯ ಅಲ್ಲಿ ವಿದ್ಯುತ್ ಕಡಿತವನ್ನು ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.