ಚೆನ್ನೈ:ತಮಿಳುನಾಡಿನ ನಿವೃತ್ತ ರಾಜ್ಯ ಸರ್ಕಾರಿ ಉದ್ಯೋಗಿಯೊಬ್ಬರು ತಮ್ಮ ಮೂರು ಮಕ್ಕಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರಿಂದ ಬೇಸತ್ತು ತಮ್ಮ ಎರಡು ಕೋಟಿ ಮೌಲ್ಯದ ಆಸ್ತಿಯನ್ನು ದೇವಾಲಯಕ್ಕೆ ದಾನ ಮಾಡಿದ್ದಾರೆ.
ಕಾಂಚೀಪುರಂ ಮೂಲದ ವೇಲಾಯುಧಂ (85) ಮತ್ತು ಅವರ ಪತ್ನಿ ಜ್ಞಾನಮಣಿ ಅವರಿಗೆ ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ. ವೇಲಾಯುಧಂ ಅವರು ಕಾಂಚೀಪುರಂ ಪುರಸಭೆಯಲ್ಲಿ ನಿವೃತ್ತ ಆರೋಗ್ಯ ನಿರೀಕ್ಷಕರಾಗಿದ್ದಾರೆ ಮತ್ತು ಅವರ ಮಗ ಕ್ರಿಶ್ಚಿಯನ್ ಹುಡುಗಿಯನ್ನು ವಿವಾಹವಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾನೆ. ಪ್ರಸ್ತುತ, ಅವರ ಎಲ್ಲಾ ಮಕ್ಕಳು ಅವರ ಮನೆಯ ಒಂದು ಭಾಗದಲ್ಲಿ ವಾಸಿಸುತ್ತಿದ್ದಾರೆ. ಅವರೆಲ್ಲಾ ಕ್ರೈಸ್ಥ ಮತ ಸ್ವೀಕರಿಸಿದ್ದಾರೆ.
ವೇಲಾಯುಧಂ ಅವರು ತಮ್ಮ ನಿಧನದ ನಂತರ ಅವರ ಮಗ ಮತ್ತು ಹೆಣ್ಣುಮಕ್ಕಳು ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿಗಳನ್ನು ಮಾಡುತ್ತಾರೆ ಎಂದು ಆಶಿಸಿದ್ದರು, ಆದರೆ ಅವರ ಭರವಸೆಯನ್ನು ಸುಳ್ಳು ಮಾಡಿ, ಅವರ ಮಗ ಮತ್ತು ಹೆಣ್ಣುಮಕ್ಕಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. “ಹಿಂದೂ ಆಗಿರುವ ನನಗೆ ನಮ್ಮ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಯಬೇಕು. ನನ್ನ ಮೂವರು ಮಕ್ಕಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಹೀಗಾಗಿ ನನ್ನ ಇಚ್ಛೆ ಹಾಗೂ ಸಂಪ್ರದಾಯದಂತೆ ಅವರು ಅಂತ್ಯಸಂಸ್ಕಾರ ಮಾಡುವುದಿಲ್ಲ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನನ್ನ ಮಕ್ಕಳಿಗೆ ನನ್ನ ಆಸ್ತಿಯನ್ನು ನೀಡಲು ನನಗೆ ಯಾವುದೇ ಆಸೆ ಇಲ್ಲ, ಅವರ ಕೃತ್ಯದಿಂದ ನನಗೆ ಬೇಸರವಾಗಿದೆ” ಎಂದು ವೇಲಾಯುಧಂ ದುಃಖದಿಂದ ಹೇಳುತ್ತಾರೆ.
ವೇಲಾಯುಧಂ ಅವರು ತಮ್ಮ 2,680 ಚದರ ಅಡಿಯ 2 ಕೋಟಿ ಮೌಲ್ಯದ ಮನೆಯನ್ನು ಕಾಂಚೀಪುರಂನಲ್ಲಿರುವ ಕುಟುಂಬದ ಆರಾಧ್ಯ ದೈವವಾದ ಕುಮಾರಕೊಟ್ಟಂ ಮುರುಗನ್ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿಗಳನ್ನು ಮಾಡಲು ತಮ್ಮ ಕುಟುಂಬದಲ್ಲಿ ಯಾರೂ ಉಳಿದಿಲ್ಲ ಎಂದು ವಿಷಾದಿಂದಲೇ ಅವರು ಈ ದಾನ ಮಾಡಿದ್ದಾರೆ.
ನಾನು ಕಷ್ಟಪಟ್ಟು ದುಡಿದ ಹಣದಲ್ಲಿ ಮನೆ ಕಟ್ಟಿದ್ದೇನೆ, ಹಿಂದೂ ಆಗಿರುವ ನನಗೆ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಯಬೇಕು, ಮತಾಂತರಗೊಂಡ ನನ್ನ ಮಕ್ಕಳು ನನಗೆ ಮತ್ತು ನನ್ನ ಹೆಂಡತಿಯ ಅಂತ್ಯಕ್ರಿಯೆಯನ್ನು ಮಾಡುವುದಿಲ್ಲ. ಹಾಗಾಗಿ ಹಿಂದೂ ಸಂಪ್ರದಾಯದಂತೆ ಮಾಡಲು ಕುಟುಂಬದಲ್ಲಿ ಯಾರೂ ಉಳಿದಿಲ್ಲ, ನನ್ನ ಭರವಸೆ ಮತ್ತು ನಂಬಿಕೆ ದ್ರೋಹ ಮಾಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ನನ್ನ ಆಸ್ತಿಯನ್ನು ನೀಡಲು ನಾನು ಬಯಸುವುದಿಲ್ಲ ಎಂದು ವೇಲಾಯುಧಂ ಹೇಳಿದ್ದಾರೆ.
ನಾನು ಮತ್ತು ನನ್ನ ಹೆಂಡತಿ ಇರುವವರೆಗೂ ನನ್ನ ಮಕ್ಕಳು ಇಲ್ಲಿ ನಮ್ಮ ಮನೆಯಲ್ಲಿ ವಾಸಿಸಬಹುದು, ಆದರೆ ನಾವು ಸತ್ತ ತಕ್ಷಣ ದೇವಾಲಯದ ಆಡಳಿತವು ಮನೆಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.