ವಾರಣಾಸಿ: ಉತ್ತರಪ್ರದೇಶ ರಾಜ್ಯದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಪ್ರಮುಖ ಉತ್ತೇಜನ ನೀಡುವ ಕಾರ್ಯ ನಡೆಯುತ್ತಿದೆ. ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಕ್ರೂಸ್ ಸೇವೆಯ ಮೂಲಕ ವಿಂಧ್ಯಾಚಲಕ್ಕೆ ಸಂಪರ್ಕಿಸುವ ಯೋಜನೆ ಕಾರ್ಯಗತಗೊಳ್ಳುವ ಹಾದಿಯಲ್ಲಿದೆ. ಗಂಗಾ ನದಿಯಲ್ಲಿ ರೋ ರೋ ದೋಣಿ ಹಡಗು ಸೇವೆಯ ಮೂಲಕ ವಿಂಧ್ಯಾಚಲ ಕಾರಿಡಾರ್ನೊಂದಿಗೆ ಕಾಶಿ ವಿಶ್ವನಾಥ ಕಾರಿಡಾರ್ ಸಂಪರ್ಕಿಸಲಾಗುತ್ತದೆ ಎಂದು ಮೂಲಗಳು ವರದಿ ಮಾಡಿವೆ.
ಮಿರ್ಜಾಪುರದ ವಾರಣಾಸಿ ಮತ್ತು ಚುಣಾರ್ ನಡುವಿನ ದೋಣಿ ಸೇವೆಯನ್ನು ಕಾಶಿ ವಿಶ್ವನಾಥ ಕಾರಿಡಾರ್ ಪೂರ್ಣಗೊಳಿಸಿದ ನಂತರ ವಿಂಧ್ಯಾಚಲಕ್ಕೆ ವಿಸ್ತರಿಸಲಾಗುತ್ತದೆ. ಧಾರ್ಮಿಕ ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳನ್ನು ಉತ್ತೇಜಿಸಲು ಈ ಕ್ರಮವನ್ನು ರೂಪಿಸಲಾಗಿದೆ.
ವಾರಣಾಸಿ ಪ್ರವಾಸೋದ್ಯಮ ಇಲಾಖೆಯು ರೋ ರೋ ಹಡಗು ಸೇವೆಯ ಮೂಲಕ ಎರಡು ಕಾರಿಡಾರ್ಗಳನ್ನು ಸಂಪರ್ಕಿಸಲು ಯೋಜನೆ ರೂಪಿಸಿದೆ ಎಂದು ಪ್ರಾದೇಶಿಕ ಪ್ರವಾಸೋದ್ಯಮ ಅಧಿಕಾರಿ ಕೀರ್ತಿಮಾನ್ ಶ್ರೀವಾಸ್ತವ ತಿಳಿಸಿದ್ದಾರೆ.
10 ತಿಂಗಳ ಹಿಂದೆ ನಗರಕ್ಕೆ ಆಗಮಿಸಿದ ಎರಡು ರೋ-ಪ್ಯಾಕ್ಸ್ ದೋಣಿಗಳಾದ ಎಂವಿ ಸ್ವಾಮಿ ವಿವೇಕಾನಂದ ಮತ್ತು ಎಂವಿ ಸ್ಯಾಮ್ ಮಾನೆಕ್ಷಾ ಈಗಾಗಲೇ ಗಂಗಾ ನದಿಯಲ್ಲಿ ಲಂಗರು ಹಾಕಿದೆ ಎಂದಿದ್ದಾರೆ.
ಎರಡು ಹಡಗುಗಳನ್ನು ರೋ ರೋ ದೋಣಿ ಸೇವೆಗೆ ಪರಿಚಯಿಸಲಾಗಿದೆ, ಇದು ಈಗಾಗಲೇ ವಾರಣಾಸಿಯಿಂದ 70 ಕಿಮೀ ದೂರದಲ್ಲಿರುವ ಮಿರ್ಜಾಪುರದ ಚುನಾರ್ ವರೆಗೆ ಆರಂಭವಾಗಿದೆ.
“ಪ್ರಯಾಣದ ಸಮಯದಲ್ಲಿ ಹಡಗುಗಳಲ್ಲಿ ಭಕ್ತಿಯ ವಾತಾವರಣವನ್ನು ಸೃಷ್ಟಿಸಲು ಭಕ್ತಿ ಗೀತೆಗಳನ್ನು ನುಡಿಸಲಾಗುತ್ತದೆ. ಅಲ್ಲದೇ ಪ್ರವಾಸಿಗರು ಅಥವಾ ಯಾತ್ರಾರ್ಥಿಗಳಿಗೆ ವಾರಣಾಸಿ ಮತ್ತು ವಿಂಧ್ಯಾಚಲ ನಡುವಿನ ಗಂಗಾ ನದಿಯ ಎರಡೂ ಬದಿಗಳಲ್ಲಿ ವಿಹಂಗಮ ನೋಟವನ್ನು ಆನಂದಿಸಲು ಅವಕಾಶವನ್ನು ನೀಡುತ್ತದೆ. “ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.