ಕುವೈಟ್: ಭಾರತೀಯರು ಎಲ್ಲೇ ನೆಲೆಸಿದರೂ ತಮ್ಮ ಸಂಪ್ರದಾಯ, ಆಚರಣೆಗಳನ್ನು ಎಂದಿಗೂ ಮರೆಯುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಕುವೈಟ್ನಲ್ಲಿನ ಅನಿವಾಸಿ ಭಾರತೀಯರ ರಕ್ಷಾಬಂಧನ ಆಚರಣೆ.
ಕುವೈಟ್ನಲ್ಲಿ ಪ್ರಪ್ರಥಮ ಬಾರಿಗೆ ಬಾಂಧವ್ಯ ಮತ್ತು ರಕ್ಷಣೆಯ ಸಂಕೇತವಾದ ರಕ್ಷಾಬಂಧನ ಹಬ್ಬವನ್ನು ಭಾರತೀಯ ದೂತವಾಸದಲ್ಲಿ ಆಚರಿಸಲಾಗಿದೆ. ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಇದರ ನೇತೃತ್ವದಲ್ಲಿ ರಕ್ಷಾಬಂಧನ ಹಬ್ಬದ ದಿನದಂದು ಈ ಆಚರಣೆ ನಡೆದಿದ್ದು, ಅಧ್ಯಕ್ಷತೆಯನ್ನು ಕುವೈಟ್ನಲ್ಲಿನ ಭಾರತೀಯ ರಾಯಭಾರಿ ಶಿಬಿ ಜಾರ್ಜ್ ಮತ್ತು ಪತ್ನಿ ವಹಿಸಿದ್ದರು. ಭಾರತದ 17 ರಾಜ್ಯಗಳಿಂದ ಸುಮಾರು 150ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕದ 25 ಕುಟುಂಬಗಳು ಭಾಗವಹಿಸಿವೆ. ಕೋವಿಡ್ ಕಾರಣದಿಂದಾಗಿ 150 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಕುವೈಟ್ ಭಾರತೀಯ ದೂತಾವಾಸ ಕಚೇರಿಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೂಡ ರಕ್ಷಾಬಂಧನ ಆಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನೆರವೇರಿದೆ.
ಈ ಆಚರಣೆ ಕುವೈಟ್ನಲ್ಲಿನ ಅನಿವಾಸಿ ಭಾರತೀಯರ ರಾಷ್ಟ್ರಭಕ್ತಿಗೆ ಸಂಕೇತವಾಗಿದೆ. ಭಾರತೀಯರು ಎಲ್ಲೇ ಇದ್ದರೂ ಭಾವನಾತ್ಮಕವಾಗಿ, ಸಾಂಸ್ಕೃತಿಕವಾಗಿ ಭಾರತದೊಂದಿಗೆ ಸದಾ ಬೆಸೆದಿರುತ್ತಾರೆ ಎಂಬುದಕ್ಕೆ ಇದು ಉದಾಹರಣೆಯೂ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.