ನವದೆಹಲಿ: ಚೀನಾ ವಿರುದ್ಧ ವಾಗ್ದಾಳಿ ನಡೆಸಿದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಮತ್ತು ಪೂರ್ವ ಲಡಾಕ್ನಲ್ಲಿ ಭಾರತೀಯ ಪಡೆಗಳೊಂದಿಗೆ ಸಂಘರ್ಷ ನಡೆಸಿದ ನಂತರ ಚೀನಾದ ಸೈನ್ಯಕ್ಕೆ ಅತ್ಯುತ್ತಮ ತರಬೇತಿ ಮತ್ತು ಸಿದ್ಧತೆಯ ಅಗತ್ಯವಿದೆ ಎಂಬುದು ಅರಿವಾಗಿದೆ ಎಂದು ಹೇಳಿದ್ದಾರೆ.
ಚೀನಿ ಸೈನಿಕರು ಮುಖ್ಯವಾಗಿ ಅಲ್ಪಾವಧಿಗೆ ಸೇನೆಗೆ ಸೇರಿಕೊಳ್ಳುತ್ತಾರೆ ಮತ್ತು ಹಿಮಾಲಯದ ಪರ್ವತ ಭೂಪ್ರದೇಶದಲ್ಲಿ ಹೋರಾಡುವ ಹೆಚ್ಚಿನ ಅನುಭವವನ್ನು ಅವರು ಹೊಂದಿಲ್ಲ ಎಂದು ರಾವತ್ ಹೇಳಿದ್ದಾರೆ.
“ಭಾರತದ ಗಡಿಯಲ್ಲಿ ಚೀನಾದ ನಿಯೋಜನೆಯು ಈಗ ಬದಲಾವಣೆಗೆ ಒಳಗಾಗಿದೆ, ಅದರಲ್ಲೂ ವಿಶೇಷವಾಗಿ 2020 ರ ಮೇ ಮತ್ತು ಜೂನ್ ತಿಂಗಳಲ್ಲಿ ಗಾಲ್ವಾನ್ ಮತ್ತು ಇತರ ಪ್ರದೇಶಗಳಲ್ಲಿ ನಡೆದ ಘಟನೆಗಳ ನಂತರ ಬದಲಾವಣೆಗಳಾಗಿವೆ. ಘಟನೆಯ ನಂತರ ಅವರು ಉತ್ತಮ ತರಬೇತಿ ಮತ್ತು ಸಿದ್ಧತೆಯ ಅಗತ್ಯ ತಮಗಿದೆ ಎಂಬುದನ್ನು ಅರಿತುಕೊಂಡಿದ್ದಾರೆ” ಎಂದು ಜನರಲ್ ರಾವತ್ ಹಾಗೂ.
ಜೂನ್ 15 ರಂದು ನಡೆದ ಗಾಲ್ವಾನ್ ವ್ಯಾಲಿ ಘರ್ಷಣೆಯಲ್ಲಿ ಚೀನಾದ ಸೈನ್ಯವು ಭಾರಿ ನಷ್ಟವನ್ನು ಅನುಭವಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.