ನವದೆಹಲಿ: ಬುದ್ಧ ಪೂರ್ಣಿಮಾ ಹಿನ್ನೆಲೆಯಲ್ಲಿ ಆಯೋಜಿಸಲಾದ ವರ್ಚುವಲ್ ವೆಸಾಕ್ ಗ್ಲೋಬಲ್ ಸೆಲೆಬ್ರೇಷನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮುಖ್ಯ ಭಾಷಣ ಮಾಡಿದ್ದು, ಭಗವಾನ್ ಬುದ್ಧನ ಬೋಧನೆಗಳಿಂದ ಜಗತ್ತು ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ಹೇಳಿದ್ದಾರೆ.
ಜಗತ್ತು ಕೋವಿಡ್ ಸಾಂಕ್ರಾಮಿಕ ರೂಪದಲ್ಲಿ ಜೀವಮಾನದಲ್ಲಿ ಒಂದು ಬಾರಿಯ ಬಿಕ್ಕಟ್ಟಿಗೆ ಸಾಕ್ಷಿಯಾಗುತ್ತಿದೆ ಎಂದು ಅವರು ಹೇಳಿದರು.
ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಧೈರ್ಯಶಾಲಿ ಹೋರಾಟ ನಡೆಸಲು ಎಲ್ಲರೂ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಮುಂಚೂಣಿ ಕಾರ್ಮಿಕರು, ವೈದ್ಯರು ಮತ್ತು ವಿಜ್ಞಾನಿಗಳ ಪ್ರಯತ್ನವನ್ನು ಶ್ಲಾಘಿಸಿದರು.
ಭಾರತವು ಸರಿಯಾದ ಪದಗಳಿಂದ ಮಾತ್ರವಲ್ಲದೆ ಸರಿಯಾದ ಕ್ರಿಯೆಗಳಿಂದಲೂ ಸುಸ್ಥಿರ ಜೀವನವನ್ನು ಸಾಧಿಸಬಹುದು ಎಂದು ನಂಬಿರುವ ದೇಶ ಎಂದಿದ್ದಾರೆ.
ಹವಾಮಾನ ಬದಲಾವಣೆಯನ್ನು ತಡೆಗಟ್ಟುವ ಸಲುವಾಗಿ ಹಸಿರು ಮನೆ ಅನಿಲಗಳ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ದೇಶ ತೆಗೆದುಕೊಂಡ ಕ್ರಮಗಳನ್ನು ಅವರು ಎತ್ತಿ ತೋರಿಸಿದರು.
ಸಂಸ್ಕೃತಿ ಸಚಿವಾಲಯವು ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ (ಐಬಿಸಿ) ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಮತ್ತು ವಿಶ್ವದಾದ್ಯಂತದ ಬೌದ್ಧ ಸಂಘಗಳ ಎಲ್ಲ ಸರ್ವೋಚ್ಚ ಮುಖ್ಯಸ್ಥರ ಭಾಗವಹಿಸುವಿಕೆಗೆ ಇದು ಇಂದು ಸಾಕ್ಷಿಯಾಯಿತು.
ಪ್ರಪಂಚದಾದ್ಯಂತದ 50 ಕ್ಕೂ ಹೆಚ್ಚು ಪ್ರಮುಖ ಬೌದ್ಧ ಧಾರ್ಮಿಕ ಮುಖಂಡರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಶ್ರೀಲಂಕಾ ಮತ್ತು ನೇಪಾಳದ ಪ್ರಧಾನ ಮಂತ್ರಿಗಳು ಮತ್ತು ಮಂಗೋಲಿಯಾ ಮತ್ತು ಭೂತಾನ್ ಸಂಸ್ಕೃತಿ ಸಚಿವರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.