News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಸ್ಪತ್ರೆಗಳು, ಆಮ್ಲಜನಕ ಪೂರೈಕೆ, ಲಸಿಕೆ ಆಮದಿಗೆ ರೂ 50,000 ಕೋಟಿ ಆದ್ಯತೆಯ ಸಾಲ: RBI

ನವದೆಹಲಿ: ಕೋವಿಡ್ -19 ರ ಎರಡನೇ ಅಲೆಯ ನಡುವೆಯೂ ಭಾರತೀಯ ಆರ್ಥಿಕತೆಯ ಎಲ್ಲಾ ವಿಭಾಗಗಳ ಮೇಲೆ ಗಮನ ಹರಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಅವರು, ಇಂದು ಮಾರಣಾಂತಿಕ ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಸ್ಥಿರತೆ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕರೋನಾ ವಿರುದ್ಧದ ಭಾರತದ ಹೋರಾಟದಲ್ಲಿ ಎಲ್ಲಾ ಪಾಲುದಾರರನ್ನು ಬಲಪಡಿಸಲು,  ಸಾಮಾನ್ಯವಾಗಿ ಸಾರ್ವಜನಿಕರನ್ನು, ಭಾರತೀಯ ಬ್ಯಾಂಕುಗಳು, ಕೈಗಾರಿಕೆಗಳು ಮತ್ತು ಇತರ ಪಾಲುದಾರರನ್ನು ಸಜ್ಜುಗೊಳಿಸಲು ವಿವಿಧ ಕ್ರಮಗಳನ್ನು ಘೋಷಿಸಿದ್ದಾರೆ.

ಇಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಡಿದ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ:

1. ಸಾರ್ವಜನಿಕರಿಗೆ 50,000 ರೂಪಾಯಿಗಳ ಒನ್ ಟ್ಯಾಪ್ ದ್ರವ್ಯತೆ ಆರ್‌ಬಿಐ ಗವರ್ನರ್ ಮಾಡಿದ ಪ್ರಮುಖ ಪ್ರಕಟಣೆಗಳಲ್ಲಿ ಒಂದಾಗಿದೆ. ಈ ಸಾಲವು 2022 ರ ಮಾರ್ಚ್ 31 ರವರೆಗೆ ಲಭ್ಯವಿರುತ್ತದೆ ಮತ್ತು ಸಾಲದ ಅವಧಿ ಮೂರು ವರ್ಷಗಳು. ಈ ದ್ರವ್ಯತಾ ಬೆಂಬಲದಲ್ಲಿ, ಕೋವಿಡ್ ಲೋನ್‌ ಬುಕ್‌ ಅನ್ನು ನಿರ್ವಹಿಸಲು ಆರ್‌ಬಿಐ ಬ್ಯಾಂಕುಗಳಿಗೆ ಅವಕಾಶ ನೀಡಿದೆ.

2. ಮುಂಬರುವ ಸಮಯದಲ್ಲಿ ಉತ್ಪಾದನೆಯು ಬೇಡಿಕೆಯನ್ನು ಪೂರೈಸುವ ನಿರೀಕ್ಷೆಯಿರುವುದರಿಂದ ಆಹಾರ ಬೆಲೆ ಹಣದುಬ್ಬರವನ್ನು ನಿಯಂತ್ರಿಸಲು ಸಾಮಾನ್ಯ ಮಾನ್ಸೂನ್ ಮುನ್ಸೂಚನೆ ಸಹಾಯಕವಾಗಲಿದೆ.

3. ಮಾರ್ಚ್ 31, 2022 ರೊಳಗೆ ಆಸ್ಪತ್ರೆಗಳು, ಆಮ್ಲಜನಕ ಪೂರೈಕೆದಾರರು, ಲಸಿಕೆ ಆಮದುದಾರರು, ಕೋವಿಡ್ ಔಷಧಿಗಳಿಗೆ ಬ್ಯಾಂಕುಗಳು ನೀಡಲಿವೆ 50,000 ಕೋಟಿ ಆದ್ಯತೆಯ ಸಾಲ.

4. ಹಿಂದೆ ಸಾಲ ಪಡೆಯದ ವ್ಯಕ್ತಿಗಳಿಗೆ,  ಸಣ್ಣ ಸಾಲಗಾರರಿಗೆ 25 ಕೋಟಿ  ಸಾಲಗಳನ್ನು ಪುನರ್‌ ರಚಿಸಲು ಎರಡನೇ ವಿಂಡೋ.

5. ಕೆಲವು ವರ್ಗಗಳಿಗೆ ವೀಡಿಯೊ ಆಧಾರಿತ ಕೆವೈಸಿಯನ್ನು ಸಕ್ರಿಯಗೊಳಿಸುವ ಕೆವೈಸಿ ಅನುಸರಣೆ ಮಾನದಂಡಗಳ ತರ್ಕಬದ್ಧಗೊಳಿಸುವಿಕೆ.

6. ಸೆಪ್ಟೆಂಬರ್ 30, 2021 ರವರೆಗೆ ರಾಜ್ಯ ಸರ್ಕಾರಗಳಿಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಲು ನಿಯಮಗಳಲ್ಲಿ ಸುಲಭತೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top