ನವದೆಹಲಿ: ಇಂದು ಭಾರತೀಯ ಪದಾತಿ ದಳ ದಿನ (Infantry day). ಇದರ ಅಂಗವಾಗಿ ನವದೆಹಲಿಯಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭೂಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ತೆರಳಿ ಗೌರವ ಸಲ್ಲಿಸಿದರು.
ಭಾರತೀಯ ಪದಾತಿ ದಳ ದಿನವನ್ನು ಪ್ರತಿವರ್ಷ ಅಕ್ಟೋಬರ್ 27ರಂದು ಆಚರಿಸಲಾಗುತ್ತದೆ. ಇದು ಪದಾತಿ ದಳದ ಧೈರ್ಯ, ಸಾಹಸ ಮತ್ತು ಕರ್ತವ್ಯ ನಿಷ್ಠೆಯನ್ನು ನೆನೆದು ಸೈನಿಕರಿಗೆ ಅಭಿನಂದನೆ ಸಲ್ಲಿಸುವ ದಿನವಾಗಿದೆ.
1947 ಅಕ್ಟೋಬರ್ 27ರಂದು ಸ್ವತಂತ್ರ ಭಾರತದ ಸೇನೆಯು ಜಮ್ಮು-ಕಾಶ್ಮೀರವನ್ನು ಉಳಿಸಿಕೊಳ್ಳಲು ಮೊದಲ ಹೆಜ್ಜೆ ಇಟ್ಟಿತು. ಸೈನ್ಯದ ಮೊಟ್ಟ ಮೊದಲ ತುಕಡಿಯ ಪದಾತಿದಳದ 1ನೇ ಸಿಖ್ ಬಟಾಲಿಯನ್ ಭಾರತೀಯ ವಾಯುಸೇನೆಯ ವಿಮಾನಗಳಲ್ಲಿ ಹಾರಿ ಶ್ರೀನಗರದ ವಿಮಾನ ತಳದಲ್ಲಿ ಇಳಿಸಲ್ಪಟ್ಟಿತು. ಸಿಖ್ ಬಟಾಲಿಯನ್ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ವಿಮಾನನಿಲ್ದಾಣವನ್ನು ಪಾಕಿಸ್ಥಾನಿ ಆಕ್ರಮಣಕಾರರಿಂದ ಕೂದಲೆಳೆಯ ಅಂತರದಲ್ಲಿ ಉಳಿಸಿಕೊಂಡಿದ್ದರಿಂದಲೇ ಇತರ ಭಾರತೀಯ ಸೇನಾ ತುಕಡಿಗಳು ಕಾಶ್ಮೀರ ಪ್ರವೇಶಿಸಿ ಪಾಕಿಸ್ಥಾನಿಗಳನ್ನು ಹಿಂದಕ್ಕೆ ತಳ್ಳಲು ಸಾಧ್ಯವಾಯಿತು. ಇದರಿಂದ ಕಾಶ್ಮೀರ ನಮ್ಮದಾಗಿ ಉಳಿಯಿತು. ಹೀಗಾಗಿ ಪದಾತಿ ದಳದ ಶೌರ್ಯಗಳನ್ನು ದೇಶ ಕೊಂಡಾಡಿ ಇಂದು ಸ್ಮರಿಸುತ್ತಿದೆ.
Delhi: Chief of Defence Staff (CDS) General Bipin Rawat, Army chief General Manoj Mukund Naravane pay tribute at National War Memorial on Infantry Day. pic.twitter.com/LH0jU0lZij
— ANI (@ANI) October 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.