ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಸಿಕ್ಕಿಂನಲ್ಲಿ ಭಾರತೀಯ ಸೇನೆಯ ಯೋಧರೊಂದಿಗೆ ನವಮಿಯ ಶುಭ ಸಂದರ್ಭದಲ್ಲಿ ‘ಶಸ್ತ್ರ ಪೂಜೆ’ ನೆರವೇರಿಸಿದರು.
ರಕ್ಷಣಾ ಸಚಿವರು ಎರಡು ದಿನಗಳ ಭೇಟಿಗಾಗಿ ಶನಿವಾರ ಸುಕ್ನಾದ 33 ಕಾರ್ಪ್ಸ್ಗೆ ಭೇಟಿ ನೀಡಿದರು ಮತ್ತು ಅಲ್ಲಿಂದ ಸಿಕ್ಕಿಂಗೆ ತೆರಳಿದ್ದಾರೆ.
ಚೀನಾ ಗಡಿ ಬಳಿಯ ನಾಥುಲಾ ಪಾಸ್ನಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಮತ್ತು ಸೈನಿಕರೊಂದಿಗೆ ಸೇರಿ ಸಿಂಗ್ ‘ಶಸ್ತ್ರ ಪೂಜೆ’ ಮಾಡಿದರು. ನಾಥುಲಾ ಪಾಸ್ ಹತ್ತಿರವಿರುವ ಸೈನಿಕರನ್ನು ಭೇಟಿ ಮಾಡಿ ಅವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಲ್ಲದೆ, ಚೀನಿಯರ ಒಳನುಸುಳುವಿಕೆಯ ಯಾವುದೇ ಪ್ರಯತ್ನವನ್ನು ತಡೆಗಟ್ಟಲು ಭಾರತವು ಹೆಚ್ಚಿನ ಸಂಖ್ಯೆಯ ಸೈನಿಕರು ಮತ್ತು ಟ್ಯಾಂಕ್ಗಳನ್ನು ನಿಯೋಜಿಸಿರುವ ಫಾರ್ವರ್ಡ್ ಸ್ಥಳಗಳಿಗೆ ಅವರು ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಡಿ ಪ್ರದೇಶಗಳಿಗೆ ಸೈನಿಕರು ಮತ್ತು ಸಾಮಾನ್ಯ ನಾಗರಿಕರನ್ನು ಸುಲಭವಾಗಿ ಸಾಗಿಸಲು ನಿರ್ಮಿಸಲಾದ ಹಲವಾರು ರಸ್ತೆ ಯೋಜನೆಗಳು ಮತ್ತು ಕಾರ್ಯತಂತ್ರದ ಸೇತುವೆಗಳನ್ನು ರಕ್ಷಣಾ ಸಚಿವರು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ, ರಾಜನಾಥ್ ಸಿಂಗ್ ಅವರು ಆಯುಧ ಪೂಜೆಯ ಸಂದರ್ಭದಲ್ಲಿ ಫ್ರಾನ್ಸಿನಲ್ಲಿ ಭಾರತದ ರಫೆಲ್ ಯುದ್ಧ ವಿಮಾನವನ್ನು ಸ್ವೀಕರಿಸಿ ಅದಕ್ಕೆ ಶಸ್ತ್ರ ಪೂಜೆ ನೆರವೇರಿಸಿದ್ದನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ.
#Breaking | Live Visuals: Defence Minister Rajnath Singh performs 'shastra pooja' with troops in Sikkim
Details by Sherine. pic.twitter.com/3TH7KonY3b
— TIMES NOW (@TimesNow) October 25, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.