ನವದೆಹಲಿ: ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಇಂದು ಎಲ್ಎಸಿ ಸಮೀಪದ ಮುಂಚೂಣಿ ಸ್ಥಳದಲ್ಲಿ ನಿಯೋಜಿತವಾದ 33 ಕಾರ್ಪ್ಸ್ಗೆ ಭೇಟಿ ನೀಡಲಿದ್ದಾರೆ. ಇದು ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ 17 (ಗ್ಯಾಂಗ್ಟಾಕ್), 27 (ಕಾಲಿಂಪಾಂಗ್) ಮತ್ತು 20 (ಬಿನ್ನಗುರಿ) ಪರ್ವತ ವಿಭಾಗಗಳನ್ನು ಹೊಂದಿರುವ ನಿರ್ಣಾಯಕ ಸೇನಾ ರಚನೆಯಾಗಿದೆ.
ಸಿಂಗ್ ತಮ್ಮ ಭೇಟಿಯ ಸಮಯದಲ್ಲಿ, ಈಶಾನ್ಯ ಪ್ರದೇಶದಲ್ಲಿ ಭಾರತೀಯ ಸೇನೆಯ ಕಾರ್ಯಾಚರಣೆಯ ಪರಿಸ್ಥಿತಿ ಮತ್ತು ಮಿಲಿಟರಿ ಸನ್ನದ್ಧತೆಯನ್ನು ಪರಿಶೀಲಿಸಲಿದ್ದಾರೆ. ಸಿಕ್ಕಿಂನ ಎಲ್ಎಸಿ ಬಳಿಯ ಶೆರಾಥಾಂಗ್, ನಾಥು ಲಾ ಮತ್ತು ಇತರ ಫಾರ್ವರ್ಡ್ ಪ್ರದೇಶಗಳಿಗೂ ಅವರು ಭೇಟಿ ನೀಡಲಿದ್ದಾರೆ.
ನವರಾತ್ರಿ ಹಿನ್ನೆಲೆಯಲ್ಲಿ ಸಿಂಗ್ ಈ ಪ್ರದೇಶದಲ್ಲಿ ಸೈನಿಕರೊಂದಿಗೆ ‘ಶಸ್ತ್ರ ಪೂಜೆ’ ನೆರವೇರಿಸಲಿದ್ದಾರೆ ಎಂದು ಹೇಳಲಾಗಿದೆ.
ಇವುಗಳ ಜೊತೆಗೆ, ಗಡಿ ರಸ್ತೆಗಳ ಸಂಸ್ಥೆ (ಬಿಆರ್ಒ) ‘ಪ್ರಾಜೆಕ್ಟ್ ಸ್ವಸ್ತಿಕ್’ ಅಡಿಯಲ್ಲಿ ಕಾರ್ಯಗತಗೊಳಿಸುತ್ತಿರುವ ಕೆಲವು ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನೂ ಸಿಂಗ್ ಪರಿಶೀಲಿಸಲಿದ್ದಾರೆ. ಪರಿಶೀಲನೆಯಾಗುವ ಯೋಜನೆಗಳಲ್ಲಿ ಸಿಕ್ಕಿಂನಲ್ಲಿ ಪರ್ಯಾಯ ಪ್ರವೇಶ ಮಾರ್ಗ ಕೂಡ ಸೇರಿದೆ.
ಚೀನಾದ ವಿಸ್ತರಣಾವಾದಿ ದುಷ್ಕೃತ್ಯಗಳು ಮತ್ತು ಮಿಲಿಟರಿ ನಿರ್ಮಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಜಾಗರೂಕತೆಯ ಸ್ಥಿತಿಯನ್ನು ಕಾಪಾಡಿಕೊಳ್ಳಲು ಎಲ್ಲಾ ಭಾರತೀಯ ಸೇನಾ ರಚನೆಗಳು ಮತ್ತು ಭಾರತೀಯ ವಾಯುಪಡೆಯ ನೆಲೆಗಳನ್ನು ಎಲ್ಎಸಿ ಉದ್ದಕ್ಕೂ ಸಕ್ರಿಯಗೊಳಿಸಲಾಗಿರುವ ಸಮಯದಲ್ಲಿ 33 ಕಾರ್ಪ್ಗಳಿಗೆ ಸಿಂಗ್ ಭೇಟಿ ಮಹತ್ವ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.