ಲಕ್ನೋ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾತಿ ಗಲಭೆಗಳ ಪ್ರಚೋದನೆಗೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಸಂಚು ರೂಪಿಸಿರುವುದಾಗಿ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು 19 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದೇಶದ್ರೋಹ, ಗಲಭೆಗೆ ಸಂಚು, ಧಾರ್ಮಿಕ ದ್ವೇಷಕ್ಕೆ ಉತ್ತೇಜನ, ಗಲಭೆಗೆ ಪಿತೂರಿ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ 13 ಪ್ರಕರಣಗಳು ದಾಖಲಾಗಿದ್ದರೆ, ಹತ್ರಾಸ್ನಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ 6 ಕೇಸ್ಗಳು ದಾಖಲಾಗಿದೆ. ಅಪರಿಚಿತರ ಮೇಲೆ ಪೊಲೀಸರು ಈ ಪ್ರಕರಣಗಳನ್ನು ದಾಖಲಿಸಿದ್ದು, ಈ ದೊಡ್ಡ ಸಂಚನ್ನು ಬೇಧಿಸುವತ್ತ ಸದ್ಯ ಚಿತ್ತ ನೆಟ್ಟಿದ್ದಾರೆ.ಈ ಪ್ರಕರಣದಲ್ಲಿ ‘ಜಸ್ಟೀಸ್ ಫಾರ್ ಹತ್ರಾಸ್, ಸಿಎಆರ್ಆರ್ಡಿಸಿಒ’ ಎಂಬ ವೆಬ್ಸೈಟ್ ಪ್ರಮುಖವಾಗಿದ್ದು, ಇದರಲ್ಲಿ ದಂಗೆ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳುವುದು ಹೇಗೆ, ಅಶ್ರುವಾಯುಗಳಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬಂತೆ ಅನೇಕ ತಪ್ಪು ಮಾಡಿ ತಲೆ ಮರೆಸಿಕೊಳ್ಳುವ ತಂತ್ರೋಪಾಯಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಘಟನೆಯ ಬಳಿಕ ವೆಬ್ಸೈಟ್ ಅನ್ನು ತೆಗೆದು ಹಾಕಲಾಗಿದ್ದು, ಈ ವೆಬ್ಸೈಟ್ ಅನ್ನು ಪ್ರಮುಖ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ಈ ಹಿಂದೆ ದೆಹಲಿಯಲ್ಲಿ ನಡೆದಿದ್ದ ಸಿಎಎ ಪ್ರತಿಭಟನೆಯಂತೆಯೇ ಹತ್ರಾಸ್ನಲ್ಲಿಯೂ ನಡೆಸಲು ಸಂಚು ರೂಪಿಸಲಾಗಿತ್ತು. ಅಲ್ಲದೆ ಅದಕ್ಕಾಗಿ ವಿದೇಶದಿಂದ ಫಂಡ್ ಸಹ ಬರುತ್ತಿತ್ತು. ಈ ವೆಬ್ಸೈಟ್ ಇದಕ್ಕಾಗಿ ನಕಲಿ ಫೋಟೋಗಳನ್ನು ಬಳಸಿ ಜನರನ್ನು ಹಿಂಸೆಗೆ ಪ್ರಚೋದಿಸುವ ಕೆಲಸವನ್ನು ಮಾಡುತ್ತಿತ್ತು. ಅದರಂತೆ ನಕಲಿ ವೆಬ್ಸೈಟ್ಗಳ ಮೂಲಕ ಅಹಮದಾಬಾದ್, ದೆಹಲಿ, ಕೋಲ್ಕತ್ತಾ ಮೂಲಕವೂ ಮಾಹಿತಿ ರವಾನೆ ಮಾಡಲಾಗುತ್ತಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ. ಈ ಮಾಹಿತಿಯನ್ನು ಪೊಲೀಸರು ಭೇದಿಸುತ್ತಲೇ, ನಕಲಿ ವೆಬ್ಸೈಟ್ಗಳು ಹೇಳ ಹೆಸರಿಲ್ಲದೆ ಮಾಯವಾಗಿವೆ. ಆದರೆ ಅದಕ್ಕೂ ಮೊದಲೇ ಪೊಲೀಸರು ಆ ವೆಬ್ಸೈಟ್ಗಳಿಗೆ ಸಂಬಂಧಿಸಿದಂತೆ ಪೂರಕ ಮಾಹಿತಿ ಕಲೆ ಹಾಕಿದ್ದಾರೆ ಎಂದೂ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.