ನವದೆಹಲಿ: ಉತ್ತರಾಖಂಡದ ಸುಮಾರು 5,000 ಹಿಮಾಲಯನ್ ಕೊಳಗಳು ಈ ವರ್ಷ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯೋಜನೆಗಳ ಮೂಲಕ ಪುನಃಶ್ಚೇತನಗೊಳ್ಳಲಿವೆ, ಸ್ಥಳೀಯ ಮಟ್ಟದ ಸಮಿತಿಗಳೊಂದಿಗೆ ಅವುಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
MGNREGAದ ಸಂಯೋಜಕರಾದ ಮೊಹಮ್ಮದ್ ಅಸ್ಲಂ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ವಲಸೆ ಕಾರ್ಮಿಕರು ರಾಜ್ಯಕ್ಕೆ ಮರಳಲು ಪ್ರಾರಂಭಿಸಿದಾಗ, ನಾವು ಅವರಿಗೆ ಉದ್ಯೋಗ ನೀಡುವ ಮಾರ್ಗಗಳನ್ನು ವಿಸ್ತರಿಸಲು ಪ್ರಯತ್ನಿಸಿದೆವು. ವಿವಿಧ ಇಲಾಖೆಗಳ ಪ್ರದೇಶಗಳನ್ನು ಒಗ್ಗೂಡಿಸುವ ಮೂಲಕ ನಾವು ಅವರಿಗೆ ಕೆಲಸ ನೀಡಿದ್ದೇವೆ. ಅದೇ ವಿಧಾನವನ್ನು ಅನುಸರಿಸಿ, ಅರಣ್ಯ, ಕಾರ್ಮಿಕ ಮತ್ತು ಕುಡಿಯುವ ನೀರಿನ ಇಲಾಖೆಗಳ ಸಹಾಯವನ್ನು ಬಳಸಿಕೊಂಡು ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆʼ ಎಂದಿದ್ದಾರೆ.
ಉತ್ತರಾಖಂಡ ಜಲ ಸಂಸ್ಥಾನವು ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಸುಮಾರು 5,000 ಕೊಳಗಳು ಮತ್ತು ರೀಚಾರ್ಜ್ ಪಾಯಿಂಟ್ಗಳನ್ನು ಗುರುತಿಸಿದೆ. ಅದನ್ನು ಪುನಶ್ಚೇತನಗೊಳಿಸಬೇಕಾಗಿದೆ ಎಂದು ಅಸ್ಲಂ ಹೇಳಿದ್ದಾರೆ.
“ಯೋಜನೆಗೆ ಸಂಬಂಧಿಸಿದ ವಿವರವಾದ ವರದಿಯನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಮತ್ತು ಶೀಘ್ರದಲ್ಲೇ ಆದೇಶವನ್ನು ಬಿಡುಗಡೆ ಮಾಡಲಾಗುವುದು. ಪ್ರತಿಯೊಂದು ಸ್ಟ್ರೀಮ್ ಅಥವಾ ವಾಟರ್ ರೀಚಾರ್ಜ್ ಪಾಯಿಂಟ್ಗೆ ಅದರ ಸ್ಥಳವನ್ನು ಅವಲಂಬಿಸಿ ಪುನಃಶ್ಚೇತನ ಪ್ರಕ್ರಿಯೆ ನಡೆಸಲಾಗುವುದು ಮತ್ತು ಯಾವ ವಿಧಾನವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುವ ಕ್ಷೇತ್ರ ತಜ್ಞರನ್ನು ನಾವು ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆ. ಕಂದಕ, ಕೊಳಗಳು, ತೋಟ, ಜಲಾನಯನ ಪ್ರದೇಶವನ್ನು ಪುನಶ್ಚೇತನಗೊಳಿಸುವಂತಹ ಕಾರ್ಯಗಳನ್ನು ಯೋಜನೆಯ ಭಾಗವಾಗಿ ಕೈಗೊಳ್ಳಲಾಗುವುದು ”ಎಂದು ಅಸ್ಲಂ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.