ನವದೆಹಲಿ: ಲಡಾಖ್ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ) ನಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ನಡೆಯುತ್ತಿರುವ ಈ ಸಂದರ್ಭದಲ್ಲಿ , ಜಮ್ಮು ಮತ್ತು ಕಾಶ್ಮೀರದ ಭಾರತೀಯ ಭೂಪ್ರದೇಶದೊಳಗೆ ಎಲ್ಒಸಿ ಮೂಲಕ ಸುಮಾರು 400 ಭಯೋತ್ಪಾದಕರಿಗೆ ಒಳನುಸುಳುವ ಅವಕಾಶವನ್ನು ಪಾಕಿಸ್ಥಾನ ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಮಾಹಿತಿಯ ಪ್ರಕಾರ, ಪ್ರಸ್ತುತ ಸುಮಾರು 400 ಭಯೋತ್ಪಾದಕರನ್ನು ಎಲ್ಒಸಿ ಬಳಿಯ ವಿವಿಧ ಲಾಂಚ್ ಪ್ಯಾಡ್ಗಳಲ್ಲಿ ಒಟ್ಟುಗೂಡಿಸಲಾಗಿದೆ ಮತ್ತು ಈ ಭಯೋತ್ಪಾದಕರು ನಿಯಂತ್ರಣ ರೇಖೆಯನ್ನು ದಾಟುವಂತೆ ಸಹಾಯ ಮಾಡಲು ಪಾಕಿಸ್ಥಾನ ಸೇನೆಯ ಎಸ್ಎಸ್ಜಿಯನ್ನು ನಿಯೋಜಿಸಲಾಗಿದೆ.
ಈ ಭಯೋತ್ಪಾದಕರು ಭಾರತಕ್ಕೆ ನುಸುಳಲು ಸಹಾಯ ಮಾಡುವ ಸಲುವಾಗಿ ಪಾಕಿಸ್ಥಾನ ಸೇನೆಯು ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮವನ್ನು ನಿರಂತರವಾಗಿ ಉಲ್ಲಂಘಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಕಣ್ಗಾವಲು ಹೆಚ್ಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ಥಾನ ಸೇನೆಯು ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲುಗೆ ಬಿಎಟಿ (ಬಾರ್ಡರ್ ಆಕ್ಷನ್ ತಂಡ) ಅನ್ನು ಸಕ್ರಿಯಗೊಳಿಸಿದೆ ಮತ್ತು ಈ ಬಿಎಟಿಗಳು ಅನೇಕ ಪ್ರದೇಶಗಳಲ್ಲಿ ಸಕ್ರಿಯವಾಗಿವೆ. ಎಲ್ಒಸಿ ಪಕ್ಕದ ಪ್ರದೇಶಗಳಲ್ಲಿನ ಪಾಕಿಸ್ಥಾನಿ ಸೇನಾ ಶಿಬಿರಗಳಲ್ಲಿ ಹಲವಾರು ಭಯೋತ್ಪಾದಕರು ಕಾಣಿಸಿಕೊಳ್ಳುತ್ತಿದ್ದಾರೆ,
ಗುಪ್ತಚರ ವರದಿಯ ಪ್ರಕಾರ, ಗುರೆಜ್, ಮಾಚಲ್, ಕೇರನ್ ಸೆಕ್ಟರ್, ತಂಗ್ಧರ್ ಸೆಕ್ಟರ್, ನೌಗಮ್ ಸೆಕ್ಟರ್, ಉರಿಯ ಪಕ್ಕದಲ್ಲಿ ಸೇರಿದಂತೆ ಹಲವು ಕಡೆಗಳಲ್ಲಿ ಲಾಂಚ್ ಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ.
ಭದ್ರತಾ ಸಂಸ್ಥೆಗಳ ಪ್ರಕಾರ, ಪಾಕಿಸ್ಥಾನ ಸೇನೆಯು ಭಾರತ ಮತ್ತು ಚೀನಾ ನಡುವಿನ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆಯ ಲಾಭವನ್ನು ಪಡೆದುಕೊಳ್ಳುವಲ್ಲಿ ನಿರತವಾಗಿದೆ. ಆದರೆ ಭಾರತೀಯ ಸೇನೆಯು ಎಲ್ಒಸಿಯಲ್ಲೂ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದೆ, ಭಯೋತ್ಪಾದಕರು ನಿಯಂತ್ರಣ ರೇಖೆಯನ್ನು ದಾಟಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ಬಗ್ಗೆ ಭಾರತೀಯ ಸೇನೆ ಹೆಚ್ಚು ಜಾಗೃತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.