ನವದೆಹಲಿ: ಇತ್ತೀಚಿನ ಭದ್ರತಾ ವರದಿಯ ಪ್ರಕಾರ, ಭಾರತ ವಿರೋಧಿ ಭಯೋತ್ಪಾದನಾ ಚಟುವಟಿಕೆಗಳಿಗೆ ಮತ್ತು ಇಸ್ಲಾಮಿಕ್ ಸಂಘಟನೆಗಳಿಗೆ ಟರ್ಕಿ ಧನಸಹಾಯ ಮತ್ತು ಬೆಂಬಲ ನೀಡುತ್ತಿರುವುದು ಕಂಡುಬಂದಿದೆ.
ಭಾರತೀಯ ಭದ್ರತಾ ಸಂಸ್ಥೆಗಳ ವರದಿಯ ಪ್ರಕಾರ, ಟರ್ಕಿ ಮೂಲದ ಹ್ಯಾಂಡ್ಲರ್ಗಳು, ಟರ್ಕಿಶ್ ಸರ್ಕಾರದಿಂದ ಬೆಂಬಲವನ್ನು ಪಡೆದುಕೊಂಡು ಭಾರತದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದಾರೆ. ಸಿರಿಯಾಗೆ ತೆರಳಿ ಐಸಿಸ್ಗಾಗಿ ಹೋರಾಡಲು ಭಾರತೀಯ ಭಯೋತ್ಪಾದಕರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ.
ಭಾರತದಲ್ಲಿ ಇತ್ತೀಚೆಗೆ ಐಸಿಸ್ ಭಯೋತ್ಪಾದಕರ ಬಂಧನದಿಂದ ಈ ಸತ್ಯ ಹೊರಬಿದ್ದಿದೆ, ಬಂಧಿತರು ಟರ್ಕಿಯ ಮೂಲಕ ಸಿರಿಯಾವನ್ನು ತಲುಸಿದ್ದಾರೆ, ಅದೇ ಮಾರ್ಗದ ಮೂಲಕ ವಾಪಾಸ್ ಬಂದಿದ್ದಾರೆ. ಐಸಿಸ್ಗೆ ಅವರ ಪ್ರವೇಶವನ್ನು ಟರ್ಕಿ ಮೂಲದ ಹ್ಯಾಂಡ್ಲರ್ಗಳು ಸುಗಮಗೊಳಿಸಿದ್ದಾರೆ ಎಂಬುದನ್ನು ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ದಕ್ಷಿಣ ಏಷ್ಯಾದ ಮುಸ್ಲಿಮರಲ್ಲಿ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಲು ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಪಾಕಿಸ್ಥಾನ ಮೂಲದ ಭಯೋತ್ಪಾದಕ ಗುಂಪುಗಳನ್ನು ಬಳಸುತ್ತಿದ್ದಾರೆ ಎಂದು ಭಾರತೀಯ ಭದ್ರತಾ ಸಂಸ್ಥೆಗಳು ಹೆಚ್ಚು ಕಳವಳ ವ್ಯಕ್ತಪಡಿಸುತ್ತಿವೆ.
“ಭಾರತ ಮೂಲದ ಇಸ್ಲಾಮಿಕ್ ಸಂಸ್ಥೆಗಳಿಗೆ ಧನಸಹಾಯ ನೀಡಲು ಟರ್ಕಿಯು ಪ್ರಯತ್ನಗಳನ್ನು ನಡೆಸುತ್ತಿದೆ, ಇದಕ್ಕಾಗಿ ಅವುಗಳು ನಾನಾ ಮಾರ್ಗ ಅನುಸರಿಸುತ್ತಿರುವುದು ಕಳವಳಕಾರಿ” ಎಂದು ಕೇಂದ್ರ ಭದ್ರತಾ ಸಂಸ್ಥೆಯಲ್ಲಿನ ಭಾರತೀಯ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟರ್ಕಿ ಅಧ್ಯಕ್ಷ ಎರ್ಡೊಗನ್ ಅವರ ಮಗ ಬಿಲಾಲ್ ವಿಧ್ವಂಸಕ ಮತ್ತು ಮೂಲಭೂತ ಇಸ್ಲಾಮಿಸ್ಟ್ ಕಾರ್ಯಾಚರಣೆಗಳ ಕಮಾಂಡರ್. ಕಳೆದ ಕೆಲವು ವರ್ಷಗಳಿಂದ, ಟರ್ಕಿಯಲ್ಲಿ ಮತ್ತು ಭಾರತ ಸೇರಿದಂತೆ ವಿಶ್ವದಾದ್ಯಂತ ಜನರಯನ್ನು ಬ್ರೈನ್ ವಾಶ್ ಮಾಡಲು ಮತ್ತು ತಮ್ಮ ವಿರೋಧಿಗಳನ್ನು ಧ್ವಂಸ ಅವರು ರಹಸ್ಯ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.