ನವದೆಹಲಿ: ಭಾರತವು ಹೊಸ ಏಕೀಕೃತ ವಾಯು ರಕ್ಷಣಾ ಕಮಾಂಡ್ (ಎಡಿಸಿ) ಸ್ಥಾಪಿಸುವತ್ತ ಹೆಜ್ಜೆ ಮುಂದಿಟ್ಟಿದೆ, ದೇಶದ ವಾಯುಪ್ರದೇಶವನ್ನು ಶತ್ರುಗಳ ವಿಮಾನಗಳು, ಕ್ಷಿಪಣಿಗಳು, ಹೆಲಿಕಾಪ್ಟರ್ಗಳು ಮತ್ತು ಡ್ರೋನ್ಗಳ ವಿರುದ್ಧ ಸಮಗ್ರ ರೀತಿಯಲ್ಲಿ ಕಾಪಾಡುವ ಜವಾಬ್ದಾರಿಯನ್ನು ಇದು ವಹಿಸಲಿದೆ. ಈ ವರ್ಷದ ಅಕ್ಟೋಬರ್ ವೇಳೆಗೆ ಇದು ಸ್ಥಾಪನೆಯಾಗುವ ನಿರೀಕ್ಷೆ ಇದೆ.
ಸೈನ್ಯ, ನೌಕಾಪಡೆ ಮತ್ತು ವಾಯುಸೇನೆಯ ಎಲ್ಲಾ ವಾಯು ರಕ್ಷಣಾ (ಎಡಿ) ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ತನ್ನ ಕಾರ್ಯಾಚರಣಾ ಅಧೀನದಲ್ಲಿ ಒಟ್ಟುಗೂಡಿಸಲಿರುವ ವಾಯು ರಕ್ಷಣಾ ಕಮಾಂಡ್ ಪ್ರಧಾನ ಕಛೇರಿ ಅಲಹಾಬಾದ್ನಲ್ಲಿ (ಪ್ರಯಾಗರಾಜ್)ನಲ್ಲಿ ಸ್ಥಾಪನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದರ ನೇತೃತ್ವವನ್ನು ಐಎಎಫ್ನ ತ್ರೀ-ಸ್ಟಾರ್ ಜನರಲ್ (ಏರ್ ಮಾರ್ಷಲ್) ವಹಿಸಲಿದ್ದಾರೆ.
ಮೂರು ಸೇವೆಗಳ ನಡುವೆ ಏಕೀಕರಣಕ್ಕಾಗಿ ದೀರ್ಘಾವಧಿಯ ಪ್ರಕ್ರಿಯೆಯ ಭಾಗವಾಗಿ ಮೊದಲ ಹೊಸ ಜಂಟಿ ಕಮಾಂಡ್ ಎಡಿಸಿ ಅನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜನವರಿಯಲ್ಲಿ ಘೋಷಿಸಿದ್ದರು.
ಭಾರತವು ಇಲ್ಲಿಯವರೆಗೆ ಕೇವಲ ಎರಡು ಏಕೀಕೃತ ಕಮಾಂಡ್ಗಳನ್ನು ಹೊಂದಿದೆ, ಆದರೆ 17 ಏಕ-ಸೇವಾ ಕಮಾಂಡ್ಗಳಿವೆ (ಆರ್ಮಿ 7, ಐಎಎಫ್ 7 ಮತ್ತು ನೇವಿ 3). ಮೊದಲ ಮತ್ತು ಏಕೈಕ “ಭೌಗೋಳಿಕ” ಕಮಾಂಡ್ ಅನ್ನು ಅಕ್ಟೋಬರ್ 2001 ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದಲ್ಲಿ ಸ್ಥಾಪಿಸಲಾಯಿತು, ಆದರೆ ದೇಶದ ಪರಮಾಣು ಶಸ್ತ್ರಾಗಾರವನ್ನು ನಿರ್ವಹಿಸಲು “ಕ್ರಿಯಾತ್ಮಕ” ಕಾರ್ಯತಂತ್ರದ ಪಡೆಗಳ ಕಮಾಂಡ್ ಅನ್ನು ಜನವರಿ 2003 ರಲ್ಲಿ ಸ್ಥಾಪಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.