ನವದೆಹಲಿ: 44 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ತಯಾರಿಕೆಗೆ ಸರ್ಕಾರ ಹೊಸ ಟೆಂಡರ್ ಆಹ್ವಾನಿಸಿದೆ. ತಾಂತ್ರಿಕ ಬಿಡ್ಗಳ ಮೌಲ್ಯಮಾಪನದಲ್ಲಿ ಕೆಲವೊಂದು ದೋಷಗಳು ಕಂಡುಬಂದ ಕಾರಣ ಹಿಂದಿನ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಟೆಂಡರ್ಗಾಗಿ ಎರಡು ಬಿಡ್ಗಳನ್ನು ಆಹ್ವಾನಿಸಲಾಗಿದೆ. ಮೊದಲನೇಯದು ತಾಂತ್ರಿಕ ಬಿಡ್ಗಳು ಮತ್ತು ಎರಡನೇಯದು ಹಣಕಾಸು ಬಿಡ್ಗಳು. ಮೊದಲು ತಾಂತ್ರಿಕ ಬಿಡ್ಗಳನ್ನು ತೆರೆಯಲಾಗುತ್ತದೆ ಮತ್ತು ಮೌಲ್ಯಮಾಪನ ಮಾಡಲಾಗುತ್ತದೆ, ಅದರ ನಂತರ ತಾಂತ್ರಿಕ ಬಿಡ್ಗಳಲ್ಲಿ ಅರ್ಹತೆ ಪಡೆದ ಬಿಡ್ಡುದಾರರಿಗೆ ಹಣಕಾಸಿನ ಬಿಡ್ಗಳನ್ನು ತೆರೆಯಲಾಗುತ್ತದೆ ಎಂದು ರೈಲ್ವೆ ತಿಳಿಸಿದೆ.
“ಸಂಪೂರ್ಣ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು, ಟೆಂಡರ್ ರದ್ದುಗೊಳಿಸಲು ಮತ್ತು ಹೊಸ ಟೆಂಡರ್ಗಳನ್ನು ಆಹ್ವಾನಿಸಲು ಸಮಿತಿ ಶಿಫಾರಸ್ಸು ಮಾಡಿದೆ. ಟೆಂಡರ್ ಸ್ವೀಕರಿಸುವ ಪ್ರಾಧಿಕಾರದ ಐಸಿಎಫ್ ಜನರಲ್ ಮ್ಯಾನೇಜರ್ ಈ ಶಿಫಾರಸ್ಸನ್ನು ಸ್ವೀಕರಿಸಿದೆ. ಒಂದು ವಾರದೊಳಗೆ ಹೊಸ ಟೆಂಡರ್ಗಳನ್ನು ಆಹ್ವಾನಿಸಲಾಗುವುದು” ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ.ಯಾದವ್ ತಿಳಿಸಿದ್ದಾರೆ.
ಪರಿಷ್ಕೃತ ಸಾರ್ವಜನಿಕ ಖರೀದಿ (ಭಾರತದಲ್ಲಿ ತಯಾರಿಸಲು ಆದ್ಯತೆ) ಆದೇಶಕ್ಕೆ ಅನುಗುಣವಾಗಿ ಮತ್ತು “ಆತ್ಮನಿರ್ಭರ ಭಾರತ” ಉಪಕ್ರಮದ ಭಾಗವಾಗಿ ಹೊಸ ಟೆಂಡರ್ ಶೀಘ್ರದಲ್ಲೇ ಹರಿ ಬಿಡಲಾಗುತ್ತದೆ ಎಂದು ರೈಲ್ವೆ ಮೊದಲೇ ತಿಳಿಸಿತ್ತು.
ಹೊಸ ಟೆಂಡರ್ನಲ್ಲಿ ಭಾರತೀಯ ರೈಲ್ವೆಯ ಎಲ್ಲಾ ಮೂರು ಉತ್ಪಾದನಾ ಘಟಕಗಳಾದ ಐಸಿಎಫ್, ಎಂಸಿಎಫ್ ಮತ್ತು ರೈಲ್ ಕೋಚ್ ಫ್ಯಾಕ್ಟರಿ – ವಂದೇ ಭಾರತ್ ರೈಲು ಸೆಟ್ಗಳನ್ನು ತಯಾರಿಸಲು ಅವಕಾಶವಿದೆ, ಈ ರೈಲು ಸೆಟ್ಗಳನ್ನು ತಯಾರಿಸುವ ಸಮಯವನ್ನು ಕಡಿಮೆಗೊಳಿಸಲಾಗುವುದು ಎಂದು ಯಾದವ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.