ನವದೆಹಲಿ: ಕೋವಿಡ್ ಪೀಡಿತ ಆರ್ಥಿಕತೆಯನ್ನು ಪುನರ್ ನಿರ್ಮಿಸುವ ಪ್ರಯತ್ನಗಳ ಭಾಗವಾಗಿ ಸ್ಥಳೀಯ ಉದ್ಯಮವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು , ದೊಡ್ಡ ದೊಡ್ಡ ಮೂಲಸೌಕರ್ಯ ಯೋಜನೆಗಳು ಮತ್ತು ನೀತಿ ಬದಲಾವಣೆಗಳನ್ನು ಒಳಗೊಂಡಂತೆ ಮತ್ತೊಂದು ಸುತ್ತಿನ ಕ್ರಮಗಳನ್ನು ಘೋಷಿಸಲು ಕೇಂದ್ರವು ಸಿದ್ಧವಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ವರದಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಈ ಕೆಲವು ಹಂತದ ಕ್ರಮಗಳನ್ನು ಅನಾವರಣಗೊಳಿಸಸುವ ಸಾಧ್ಯತೆ ಇದೆ, ಇದು ತೆರಿಗೆ ಆಡಳಿತವನ್ನು ಮರುಹೊಂದಿಸುವ ಉಪಕ್ರಮವನ್ನೂ ಸಹ ಒಳಗೊಂಡಿರುವ ನಿರೀಕ್ಷೆ ಇದೆ. ಈ ಕ್ರಮಗಳನ್ನು ಶೀಘ್ರದಲ್ಲೇ ಘೋಷಿಸಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಉದ್ಯಮವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವ ಕ್ರಮವು ಆತ್ಮನಿರ್ಭರ ಭಾರತ ಅಭಿಯಾನ ಅಥವಾ ಸ್ವಾವಲಂಬನೆ ಅಭಿಯಾನದ ಭಾಗವಾಗಲಿದೆ ಎಂದು ಮೂಲಗಳು ಹೇಳಿವೆ.
ಈ ಹೊಸ ಕ್ರಮಗಳು ಈ ಹಿಂದೆ ಘೋಷಿಸಲಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಮತ್ತು ಆತ್ಮನಿರ್ಭರ ಭಾರತದ ಪುನರುಜ್ಜೀವನ ಕಾರ್ಯಕ್ರಮಗಳನ್ನು ಅನುಸರಿಸಲಿದೆ ಎಂದು ಹೇಳಲಾಗಿದೆ.
“ಕೋವಿಡ್ ಆಘಾತದ ವಿರುದ್ಧ ಉದ್ಯಮಕ್ಕೆ ನಿರಾಳತೆ ಒದಗಿಸುವುದನ್ನು ಮೊದಲ ಎರಡು ಪ್ಯಾಕೇಜ್ ಕ್ರಮಗಳು ಒಳಗೊಂಡಿದ್ದವು, ಈ ಬಾರಿಯ ಕ್ರಮವು ಪುನರ್ ನಿರ್ಮಾಣದ ಮೇಲೆ ಕೇಂದ್ರೀಕರಿಸುತ್ತದೆ ಎಂದು ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.
ಸರ್ಕಾರವು ಹೆಚ್ಚು ಡಿಜಿಟಲ್ ಕೇಂದ್ರೀಕೃತ ತೆರಿಗೆ ಆಡಳಿತವನ್ನು ಅನಾವರಣಗೊಳಿಸಬಹುದು, ತೆರಿಗೆದಾರರ ಹಕ್ಕುಗಳನ್ನು ಪ್ರತಿಪಾದಿಸುವುದು, ರಕ್ಷಣಾ ಖರೀದಿಯ ಹೊರೆ ಮತ್ತು ಪ್ರಮುಖ ಮೂಲಸೌಕರ್ಯ ಯೋಜನೆಗಳ ವೆಚ್ಚವನ್ನು ಗಡುವಿನೊಳಗೆ ಪೂರ್ಣಗೊಳಿಸುವ ಕ್ರಮಗಳು ಇದರಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.
ದೇಶೀಯ ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ವಿದೇಶಿ ತಯಾರಕರು ದೇಶದಲ್ಲಿ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಸುಲಭ ಮತ್ತು ಹೆಚ್ಚು ಆಕರ್ಷಕವಾಗಿ ಮಾಡುವುದು ಕೇಂದ್ರದ ಗುರಿಯಾಗಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.