ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿ ಒಂದು ವರ್ಷ ಪೂರ್ಣಗೊಂಡಿದೆ. ಅಲ್ಲಿ ದಶಕಳಿಂದ ಇದ್ದ ಸಕ್ರಿಯ ಉಗ್ರಗಾಮಿತ್ವವು ಈಗ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಮತ್ತು ಭದ್ರತಾ ಪಡೆಗಳ ನಿರಂತರ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳಿಂದಾಗಿ ಎಲ್ಲಾ ಭಯೋತ್ಪಾದಕ ಗುಂಪುಗಳು ಈಗ ನಾಯಕನಿಲ್ಲದೆ ಅನಾಥವಾಗಿ ಹೋಗಿವೆ. ಭಯೋತ್ಪಾದಕರ ಸಂಪೂರ್ಣ ವಿನಾಶದ ಕಾರ್ಯ ಅಲ್ಲಿ ಆರಂಭಗೊಂಡಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರು ಈ ಬಗ್ಗೆ ಮಾತನಾಡಿದ್ದು, “ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯ ಭಯೋತ್ಪಾದಕರು ಈ ಹಿಂದೆ 350 ಅಥವಾ 400 ಮಂದಿ ಇದ್ದರು. ಆದರೆ ಈಗ 200 ರಷ್ಟಿದ್ದಾರೆ. ಎಲ್ಲಾ ಭಯೋತ್ಪಾದಕ ಸಂಘಟನೆಗಳು ಈಗ ನಾಯಕರಿಲ್ಲದೆ ಮುಂದುವರೆಯುತ್ತಿವೆ ಮತ್ತು ಪಾಕಿಸ್ಥಾನ ಮೂಲದ ಹ್ಯಾಂಡ್ಲರ್ಗಳಿಂದ ಗುಂಪಿನ ನಾಯಕರಾಗಿ ನೇಮಕವಾದವರನ್ನು ಹತ್ಯೆ ಮಾಡಲಾಗಿದೆ ಅಥವಾ ಬಂಧಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
“2019ರಲ್ಲಿ ಜುಲೈವರೆಗೆ ಒಟ್ಟು 131 ಉಗ್ರರನ್ನು ಕೊಲ್ಲಲಾಯಿತು ಆದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ನಾವು ನಿರತರಾಗಿದ್ದರಿಂದ ಆ ವರ್ಷ ಜುಲೈನಿಂದ ಡಿಸೆಂಬರ್ ವರೆಗೆ ಕೇವಲ 29 ಮಂದಿಯನ್ನು ಮಾತ್ರ ಕೊಂದಿದ್ದೇವೆ. ಒಟ್ಟಾರೆಯಾಗಿ, ನಾವು 2019 ರಲ್ಲಿ 67 ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿ 160 ಉಗ್ರರನ್ನು ಕೊಂದಿದ್ದೇವೆ ಮತ್ತು 5,000 ಕ್ಕೂ ಹೆಚ್ಚು ಕಾರ್ಡನ್ ಮತ್ತು ಪ್ರದೇಶ ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದೇವೆ “ಎಂದು ಸಿಂಗ್ ಹೇಳಿದರು.
ಈ ವರ್ಷ ಅಂದರೆ 2020ರಲ್ಲಿ ಇಲ್ಲಿಯವರೆಗೆ ಒಟ್ಟು 150 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅವರು ಹೇಳಿದರು.
ಈ 150 ಭಯೋತ್ಪಾದಕರಲ್ಲಿ 30 ಮಂದಿ ವಿದೇಶಿಯರು ಮತ್ತು 120 ಸ್ಥಳೀಯರು, ಎಲ್ಲ ಪ್ರಮುಖ ಗುಂಪುಗಳ 39 ಉನ್ನತ ಕಮಾಂಡರ್ಗಳು ಹತರಲ್ಲಿ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.