ಲಕ್ನೋ: ಪವಿತ್ರ ಭೂಮಿ ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆಗೆ ಸಿದ್ಧವಾಗುತ್ತಿರುವಂತೆ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧಿಕೃತ ನಿವಾಸದಲ್ಲೂ ಸಂಭ್ರಮ ಮನೆ ಮಾಡಿದೆ. ಮಂಗಳವಾರ ರಾತ್ರಿ ಅವರ ನಿವಾಸ ದೀಪಗಳ ಬೆಳಕಿನಲ್ಲಿ ಕಂಗೊಳಿಸಿದೆ.
ದೀಪಗಳು, ಹೂವಿನಿಂದ ರಚಿಸಲಾದ ರಂಗೋಲಿಗಳು ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಹೊಸ ಸೊಬಗನ್ನು ನೀಡಿವೆ.
ಸಂಭ್ರಮದ ಭಾಗವಾಗಿ ಯೋಗಿ ಅವರು ಅನಾರ್ (Flowerpot) ಪಟಾಕಿಯನ್ನು ಹೊತ್ತಿಸಿ ಖುಷಿಪಟ್ಟಿದ್ದಾರೆ.
‘ಭೂಮಿ ಪೂಜೆ’ ಆಚರಣೆಗಾಗಿ ಆಗಸ್ಟ್ 3 ರಿಂದ 5 ರವರೆಗೆ ಎಲ್ಲಾ ರಾಮ ಭಕ್ತರು ದೀಪ ಹೊತ್ತಿಸುವಂತೆ ಮತ್ತು ತಮ್ಮ ಮನೆಗಳನ್ನು ಬೆಳಗಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಅಯೋಧ್ಯೆಯನ್ನು ಸೋಮವಾರದಿಂದ ಈಗಾಗಲೇ ವಿವಿಧ ಬಣ್ಣಗಳ ದೀಪಗಳಿಂದ ಬೆಳಗಿಸಲಾಗಿದೆ.
ಈ ಐತಿಹಾಸಿಕ ಶುಭ ಸಂದರ್ಭವನ್ನು ಗುರುತಿಸಲು ಮುಖ್ಯಮಂತ್ರಿಯಲ್ಲದೆ, ಹಲವಾರು ಮಂತ್ರಿಗಳು, ಶಾಸಕರು ಮತ್ತು ಸಾಮಾನ್ಯ ಜನರು ಮಂಗಳವಾರ ದೀಪಗಳನ್ನು ಬೆಳಗಿಸಿದರು.
#WATCH Chief Minister Yogi Adityanath lights a firecracker at his official residence in Lucknow as part of ‘deepotsav’, ahead of the foundation stone laying ceremony of #RamTemple in Ayodhya tomorrow. pic.twitter.com/YUogsmwXGd
— ANI UP (@ANINewsUP) August 4, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.