ನವದೆಹಲಿ: ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಬುಧವಾರ ಸಚಿವರುಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಆರೋಗ್ಯ ಹರ್ಷವರ್ಧನ್ ಅವರು, ದೇಶದಲ್ಲಿ ಇನ್ನೂ ಮಾರಣಾಂತಿಕ ವೈರಸ್ನ ಸಮುದಾಯ ಹರಡುವಿಕೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಇಂದಿನ ನಮ್ಮ ಚರ್ಚೆಯ ಸಂದರ್ಭದಲ್ಲಿ, ತಜ್ಞರು ಭಾರತದಲ್ಲಿ ಸಮುದಾಯ ಪ್ರಸರಣ ಆಗುತ್ತಿಲ್ಲ ಎಂಬುದನ್ನು ಪುನರುಚ್ಛರಿಸಿದ್ದಾರೆ. ಪ್ರಸರಣ ಹೆಚ್ಚಿರುವ ಕೆಲವು ಸ್ಥಳೀಯ ಪ್ರದೇಶಗಳಲ್ಲಿ ಸಮುದಾಯ ಪ್ರಸರಣ ಇರಬಹುದು ಆದರೆ ದೇಶವ್ಯಾಪಿಯಾಗಿ ಯಾವುದೇ ಸಮುದಾಯ ಪ್ರಸರಣವಿಲ್ಲ” ಎಂದು ಸಚಿವರುಗಳ ಗುಂಪಿನ ಸಭೆ ಬಳಿಕ ಹರ್ಷವರ್ಧನ್ ಹೇಳಿದರು.
ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ಪುನರುಚ್ಚರಿಸಿದ ಅವರು, ಜನರು ಕೋವಿಡ್-19 ಪರಿಸ್ಥಿತಿಯನ್ನು ಸರಿಯಾದ ದೃಷ್ಟಿಕೋನದಿಂದ ನೋಡಬೇಕಾಗಿದೆ ಎಂದು ಹೇಳಿದರು.
“ಭಾರತವು 3 ನೇ ಹೆಚ್ಚು ಕೋವಿಡ್-19 ಪೀಡಿತ ದೇಶವಾಗಿದೆ ಎಂದು ನಾವು ಟಿವಿಯಲ್ಲಿ ನೋಡುತ್ತಿದ್ದೇವೆ. ಇದನ್ನು ಸರಿಯಾದ ದೃಷ್ಟಿಕೋನದಿಂದ ನೋಡುವುದು ಅವಶ್ಯಕ. ನಾವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ, ಪ್ರತಿ ಮಿಲಿಯನ್ಗೆ ನಮ್ಮ ಪ್ರಕರಣಗಳು 538, ಆದರೆ ವಿಶ್ವದ ಸರಾಸರಿ 1,453 ಆಗಿದೆ” ಎಂದಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಭಾರತವು 24,879 ಕ್ಕೂ ಹೆಚ್ಚು ಹೊಸ ಕರೋನವೈರಸ್ ಪ್ರಕರಣಗಳು ಮತ್ತು 487 ಸಾವುಗಳನ್ನು ದಾಖಲಿಸಿದ ಒಂದು ದಿನದಂದು ಕೇಂದ್ರ ಆರೋಗ್ಯ ಸಚಿವರ ಹೇಳಿಕೆ ಹೊರಬಿದ್ದಿದೆ. ಗುರುವಾರ ಒಟ್ಟು 21,129 ಸಾವುಗಳೊಂದಿಗೆ ಕೊರೋನಾ ಪ್ರಕರಣ ಭಾರತದಲ್ಲಿ 7,67,296 ಕ್ಕೆ ತಲುಪಿದೆ.
ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಒಟ್ಟು 7,67,296 ಪ್ರಕರಣಗಳಲ್ಲಿ 4,76,377 ಚೇತರಿಸಿಕೊಂಡಿದ್ದರೆ, ದೇಶದಲ್ಲಿ 2,69,789 ಪ್ರಕರಣಗಳು ಸಕ್ರಿಯವಾಗಿವೆ. ಹೆಚ್ಚಿನ ಕೋವಿಡ್-19 ರೋಗಿಗಳು ಚೇತರಿಸಿಕೊಳ್ಳುವುದರೊಂದಿಗೆ, ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರವು ಎರಡು ಲಕ್ಷ ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.