ನವದೆಹಲಿ: ಚೀನಾದೊಂದಿಗೆ ನಡೆದ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಎಂ.ಎಂ.ನರವಾನೆ ಅವರು ಬುಧವಾರ ಪೂರ್ವ ಲಡಾಕ್ನ ಮುಂಭಾಗದ ಪ್ರದೇಶಗಳಿಗೆ ಭೇಟಿ ನೀಡಿ ತಳಮಟ್ಟದ ಕಾರ್ಯಾಚರಣೆಯ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆಯನ್ನು ಪರಿಶೀಲಿಸಿದರು. ಎರಡು ದಿನಗಳ ಭೇಟಿಗಾಗಿ ಜನರಲ್ ನರವಾನೆ ಲೇಹ್ಗೆ ಆಗಮಿಸಿದರು.
ಈ ಪ್ರದೇಶದಲ್ಲಿ ಇತ್ತೀಚೆಗೆ ಚೀನಾದೊಂದಿಗೆ ನಡೆದ ಮುಖಾಮುಖಿಯ ಸಂದರ್ಭದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ವಿರುದ್ಧ ಧೈರ್ಯದಿಂದ ಹೋರಾಡಿದ ಸೈನಿಕರಿಗೆ ಅವರು ಕಮಂಡೇಶನ್ ಕಾರ್ಡ್ಗಳನ್ನು ಪ್ರದಾನಿಸಿದರು.
ಸೇನಾ ಮುಖ್ಯಸ್ಥರು ಸೇನೆಯ ಉನ್ನತ ಮನೋಸ್ಥೈರ್ಯವನ್ನು ಶ್ಲಾಘಿಸಿದರು ಮತ್ತು ಉತ್ಸಾಹ ಮತ್ತು ಶೌರ್ಯದ ಕೆಲಸ ಮಾಡುವುದನ್ನು ಮುಂದುವರೆಸುವಂತೆ ಅವರಿಗೆ ಸೂಚಿಸಿದರು.
ಈ ಬಗ್ಗೆ ಟ್ವಿಟ್ ಮಾಡಿರುವ ಸೇನೆ, “ಜನರಲ್ ಎಂಎಂ ನರವಾನೆ ಪೂರ್ವ ಲಡಾಖ್ನ ಮುಂಭಾಗದ ಪ್ರದೇಶಗಳಿಗೆ ಭೇಟಿ ನೀಡಿದರು ಮತ್ತು ತಳಮಟ್ಟದ ಕಾರ್ಯಾಚರಣೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸೈನ್ಯದ ಮನೋಸ್ಥೈರ್ಯವನ್ನು ಅವರು ಶ್ಲಾಘಿಸಿದರು ಮತ್ತು ಉತ್ಸಾಹ ಮತ್ತು ಶೌರ್ಯದ ಕೆಲಸ ಮಾಡಲು ಅವರಿಗೆ ಸೂಚಿಸಿದರು” ಎಂದಿದೆ.
ನರವಾನೆ ಅವರು ಜೂನ್ 23ರಂದು ಲೇಹ್ನ ಮಿಲಿಟರಿ ಆಸ್ಪತ್ರೆಯಲ್ಲಿ ಸೈನಿಕರೊಂದಿಗೆ ಸಂವಾದ ನಡೆಸಿದ್ದರು. ಭೇಟಿಗೂ ಮುಂಚಿತವಾಗಿ, ಸೇನಾ ಮುಖ್ಯಸ್ಥರು ದೆಹಲಿಯ ಎಲ್ಲಾ ಕಮಾಂಡರ್ಗಳೊಂದಿಗೆ ಚರ್ಚೆ ನಡೆಸಿದರು. ಲೇಹ್ ತಲುಪಿದ ನಂತರ, ಜನರಲ್ ನರವಾನೆ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ಸಂದರ್ಭದಲ್ಲಿ ಗಾಯಗೊಂಡ ಸೈನಿಕರನ್ನು ಭೇಟಿ ಮಾಡಲು ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದರು.
General MM Naravane #COAS visited forward areas in Eastern #Ladakh and reviewed operational situation on the ground. #COAS commended the troops for their high morale and exhorted them to continue working with zeal and enthusiasm.#NationFirst pic.twitter.com/gc0rmw69Fs
— ADG PI – INDIAN ARMY (@adgpi) June 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.