ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ನಡೆದ ಘರ್ಷಣೆಯನ್ನು ಚೀನಾದ ಶತ್ರು ರಾಷ್ಟ್ರ ತೈವಾನ್ನ ಮಾಧ್ಯಮವೊಂದು ಅತ್ಯಂತ ವಿಶೇಷವಾಗಿ ಪ್ರತಿಬಿಂಬಿಸಿದೆ. ಭಾರತದ ಶ್ರೀರಾಮ ಚೀನಾದ ಡ್ರ್ಯಾಗನ್ ಅನ್ನು ಸಂಹರಿಸಿದ ಎಂಬ ಅರ್ಥ ನೀಡುವ ಚಿತ್ರವನ್ನು ಅದು ಪ್ರಕಟಿಸಿದೆ.
ತೈವಾನ್ ಟೈಮ್ಸ್ ಪತ್ರಿಕೆಯು ಪ್ರಕಟಿಸಿದ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ರಾಮ ಬಿಲ್ಲು ಹಿಡಿದು ಚೀನಾದ ಡ್ರ್ಯಾಗನ್ ಅನ್ನು ಸಂಹರಿಸುವ ಮಾರದಿಯಲ್ಲಿ ಚಿತ್ರವನ್ನು ಬಿಡಿಸಲಾಗಿದೆ. “ನಾವು ದಿಗ್ವಿಜಯ ಸಾಧಿಸುತ್ತೇವೆ, ನಾವು ಕೊಲ್ಲುತ್ತೇವೆʼ ಎಂಬ ಒಕ್ಕಣೆಯನ್ನು ನೀಡಲಾಗಿದೆ.
ವರದಿಯ ಪ್ರಕಾರ, ಹಾಂಗ್ ಕಾಂಗ್ ಟ್ವಿಟರ್ ಬಳಕೆದಾರ ಹೊಸೈಲಿ ಮಂಗಳವಾರ “ಭಾರತೀಯ ಸ್ನೇಹಿತ ಈ ವಿಭಿನ್ನ ಚೀನಾ-ಭಾರತೀಯ ಯುದ್ಧ ಪೋಸ್ಟರ್ ಅನ್ನು ಈಗಾಗಲೇ ಮುಗಿಸಿದ್ದಾರೆ” ಎಂದು ಬರೆದಿದ್ದಾರೆ. 21 ಗಂಟೆಗಳಲ್ಲಿ ಪೋಸ್ಟ್ 861 ಲೈಕ್, 300 ರಿಟ್ವೀಟ್ ಮತ್ತು 34 ಕಾಮೆಂಟ್ಗಳನ್ನು ಗಳಿಸಿದೆ ಎಂದು ವರದಿ ತಿಳಿಸಿದೆ.
ಅನೇಕ ಭಾರತೀಯ ನೆಟಿಜನ್ಗಳು ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ಹೊಸೈಲಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆಂದು ವರದಿಯಾಗಿದೆ.
ಜೂನ್ 15 ರ ರಾತ್ರಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಘರ್ಷಣೆಯಲ್ಲಿ, ಚೀನಾದ ಕಡೆಯವರು ಅಪಾರ ಸಾವುನೋವುಗಳನ್ನು ಅನುಭವಿಸಿದ್ದಾರೆ. ಪೀಪಲ್ಸ್ ಲಿಬರೇಶನ್ ಆರ್ಮಿ ಎಷ್ಟು ಸಾವುನೋವುಗಳನ್ನು ಕಂಡಿದೆ ಎಂಬ ಬಗ್ಗೆ ಚೀನಾ ಇನ್ನೂ ಮಾತನಾಡಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.