ನವದೆಹಲಿ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಆದರೆ ರಾಮ ಮಂದಿರಕ್ಕೆ ಶಿಲಾನ್ಯಾಸದ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೇ ನೆರವೇರಿಸಬೇಕು ಎಂಬ ಇಂಗಿತವನ್ನು ಹಲವಾರು ಸಂತರು, ಅದರಲ್ಲೂ ಮುಖ್ಯವಾಗಿ ಅಖಿಲ ಭಾರತೀಯ ಅಖರಾ ಪರಿಷತ್ ವ್ಯಕ್ತಪಡಿಸಿದೆ ಎಂದು ವರದಿಗಳು ತಿಳಿಸಿವೆ.
ವರದಿಯ ಪ್ರಕಾರ, ಅಖಿಲ ಭಾರತೀಯ ಅಖರಾ ಪರಿಷತ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರು ದೇವಾಲಯದ ನಿರ್ಮಾಣ ಕಾರ್ಯಗಳನ್ನು ಪ್ರಾರಂಭಿಸುವುದಕ್ಕೆ ಜುಲೈ 2 ಅನ್ನು ಪರಿಗಣಿಸಲಾಗುತ್ತಿದೆ ಎಂದಿದ್ದಾರೆ. ಮಾತ್ರವಲ್ಲದೇ, ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಭವ್ಯ ರಾಮ ದೇಗುಲಕ್ಕೆ ಅಡಿಪಾಯ ಹಾಕಿದರೆ ಸಂತರು ಸಂತಸಗೊಳ್ಳುತ್ತಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಬುಧವಾರ ಬೆಳಿಗ್ಗೆ ಅಯೋಧ್ಯೆಯ ಕುಬೇರ ತಿಲಾ ದೇವಸ್ಥಾನದಲ್ಲಿ ವಿಸ್ತೃತವಾಗಿ ರುದ್ರಾಭಿಷೇಕ ಸಮಾರಂಭ ಮತ್ತು ಆರತಿ ಕಾರ್ಯಕ್ರಮವನ್ನು ನೆರವೇರಿಸುವ ಮೂಲಕ ದೇವಾಲಯ ನಿರ್ಮಾಣದ ಆರಂಭವನ್ನು ಗುರುತಿಸಲಾಯಿತು. ಮಹಂತ್ ಕಮಲ್ ನಯನ್ ದಾಸ್ ನೇತೃತ್ವದಲ್ಲಿ ನಡೆದ ರುದ್ರಾಭಿಷೇಕದಲ್ಲಿ ಸುಮಾರು 25 ಅರ್ಚಕರು ಭಾಗವಹಿಸಿದ್ದರು.
ಮಹಂತರ ಪ್ರಕಾರ ರುದ್ರಾಭಿಷೇಕವನ್ನು ಶಿವನನ್ನು ಪ್ರಾರ್ಥಿಸಲು ಮತ್ತು ದೇವಾಲಯದ ನಿರ್ಮಾಣದ ಹಾದಿಯಲ್ಲಿ ಬರುವ ಯಾವುದೇ ಅಡೆತಡೆಗಳಿಂದ ಅವನ ರಕ್ಷಣೆಯನ್ನು ಪಡೆಯಲು ನೆರವೇರಿಸಲಾಯಿತು. ರುದ್ರಾಭಿಷೇಕದ ಬಳಿಕ ದೇವಾಲಯದ ಸ್ಥಳದಲ್ಲಿ ಪ್ರಾಥಮಿಕ ಕಾರ್ಯಗಳು ಪ್ರಾರಂಭವಾಗಿವೆ.
ಕರೋನಾ ಬಿಕ್ಕಟ್ಟಿನ ದೃಷ್ಟಿಯಿಂದ, ಭವ್ಯ ಭೂಮಿ ಪೂಜಾನ ಸಮಾರಂಭವನ್ನು ನಡೆಸುವ ಯೋಜನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಜೂನ್ 8ರಂದು ಎರಡು ತಿಂಗಳ ಅಂತರದ ನಂತರ ಅಯೋಧ್ಯೆಯ ತಾತ್ಕಾಲಿಕ ರಾಮ ದೇವಾಲಯವನ್ನು ಭಕ್ತರಿಗಾಗಿ ತೆರೆಯಲಾಯಿತು. ಈ ದೇವಾಲಯವು ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಮತ್ತು ನಂತರ ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ದಿನದಲ್ಲಿ ಒಟ್ಟು ಎಂಟು ಗಂಟೆಗಳ ಕಾಲ ತೆರೆದಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.