ನವದೆಹಲಿ: ಗರ್ಭಿಣಿ ಆನೆಗೆ ಕಿರಾತಕರು ಸಿಡಿಮದ್ದು ತುಂಬಿದ್ದ ಅನಾನಸ್ ಅನ್ನು ತಿನ್ನಿಸಿದ್ದ ಪರಿಣಾಮ ಅತ್ಯಂತ ಭೀಕರವಾದ ರೀತಿಯಲ್ಲಿ ಆನೆ ಅಸುನೀಗಿದ ಘಟನೆ ಕೇರಳದಲ್ಲಿ ನಡೆದಿದೆ. ಈ ಘಟನೆಗೆ ವ್ಯಾಪಕವಾದ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಭಾರೀ ಆಕ್ರೋಶಗಳನ್ನು ಹೊರ ಹಾಕುತ್ತಿದ್ದಾರೆ.
ಬಿಜೆಪಿ ಸಂಸದೆ ಮತ್ತು ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, “ವ್ಯಾಪಕವಾಗಿ ಪ್ರಾಣಿ ಹಿಂಸೆ ನಡೆಯುತ್ತಿದ್ದರೂ ಕೇರಳ ಸರ್ಕಾರ ಕ್ರಮ ಜರುಗಿಸಲು ವಿಫಲವಾಗಿದೆ” ಎಂದಿದ್ದಾರೆ.
“ಮಲ್ಲಪುರಂ ವ್ಯಾಪಕ ಪ್ರಾಣಿ ಹಿಂಸೆ ಹೆಸರುವಾಸಿಯಾಗಿದೆ. ಯಾವೊಬ್ಬ ಹಿಂಸಕನ ಅಥವಾ ವನ್ಯಜೀವಿ ಭಕ್ಷಕನ ವಿರುದ್ಧವೂ ಕ್ರಮ ಜರುಗಿಸಲಾಗಿಲ್ಲ. ಹೀಗಾಗಿ ತಮ್ಮ ಕೃತ್ಯವನ್ನು ಅವರು ಮುಂದುವರೆಸುತ್ತಿದ್ದಾರೆ. ನೀವು ಕರೆ ಮಾಡಿ, ಮೇಲ್ ಮಾಡಿ ಕ್ರಮ ಜರುಗಿಸುವಂತೆ ಬೇಡಿಕೆಯಿಡಿ ಎಂದಷ್ಟೇ ನಾನು ನಿಮ್ಮಲ್ಲಿ ಕೇಳಿಕೊಳ್ಳಬಲ್ಲೇ” ಎಂದಿದ್ದಾರೆ.
ತಮ್ಮ ಟ್ವೀಟ್ನೊಂದಿಗೆ ದಾಖಲೆಯನ್ನು ಅಂಟಿಸಿರುವ ಅವರು, ಅದರಲ್ಲಿ “ಸುಮಾರು 600 ಆನೆಗಳನ್ನು ಕಾಲಿಗೆ ಸಂಕೋಲೆ ಕಟ್ಟಿ, ಉಪವಾಸ ಹಾಕಿ ಹತ್ಯೆ ಮಾಡಲಾಗಿದೆ. ಕೆಲವು ಖಾಸಗಿ ಮಾಲೀಕರು ಆನೆಗಳಿಗೆ ಇನ್ಸುರೆನ್ಸ್ ಮಾಡಿಸಿ ಬಳಿಕ ಅವುಗಳನ್ನು ಬೇಕಂತಲೇ ಮುಳುಗಿಸಿ ಸಾಯಿಸುತ್ತಿದ್ದಾರೆ. ಆನೆಯ ಬಗ್ಗೆ ನಿರಂತವಾಗಿ ನಾನು ಇಲಾಖೆಗಳೊಂದಿಗೆ ಮಾತನಾಡುತ್ತೇನೆ, ಆದರೆ ಅವರು ಏನ್ನನ್ನೂ ಮಾಡುವುದಿಲ್ಲ” ಎಂದಿದ್ದಾರೆ.
ಮಾತ್ರವಲ್ಲದೇ ಕೇರಳ ಅರಣ್ಯ ಸಚಿವರ ಮತ್ತು ಇತರ ಅಧಿಕಾರಿಗಳ ಫೋನ್ ನಂಬರ್ ಅನ್ನು ಅವರು ಹಂಚಿಕೊಂಡಿದ್ದು, ಅವರನ್ನು ತಲುಪುವಂತೆ ಜನರಿಗೆ ಮನವಿ ಮಾಡಿದ್ದಾರೆ.
Mallapuram is know for its intense criminal activity specially with regards to animals. No action has ever been taken against a single poacher or wildlife killer so they keep doing it.
I can only suggest that you call/email and ask for action pic.twitter.com/ii09qmb7xW— Maneka Sanjay Gandhi (@Manekagandhibjp) June 3, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.