ನವದೆಹಲಿ: ಕಳೆದ 27 ವರ್ಷಗಳಲ್ಲೇ ಅತ್ಯಂತ ಕೆಟ್ಟ ಮಿಡತೆ ದಾಳಿ ಭಾರತದಲ್ಲಿ ನಡೆದಿದೆ. ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಉತ್ತರಪ್ರದೇಶ ಮತ್ತು ಉತ್ತರ ಭಾರತದ ಹಲವಾರು ರಾಜ್ಯಗಳು ಮಿಡತೆ ದಾಳಿಯಿಂದ ಸಂಕಷ್ಟಕ್ಕೆ ಒಳಗಾಗುವ ಆತಂಕ ಎದುರಾಗಿದೆ. ಈ ರಾಜ್ಯಗಳಲ್ಲಿ ಈಗಾಗಲೇ ರೈತರಿಗೆ ಮತ್ತು ಆಡಳಿತಗಳಿಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.
ಈಗಾಗಲೇ ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದ ತತ್ತರಿಸಿರುವ ದೇಶಕ್ಕೆ ಮಿಡತೆ ದಾಳಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಿಡತೆಗಳು ಸಮೂಹವನ್ನು ಎದುರಿಸಲು ಸರಕಾರವು ಸ್ಪ್ರೇಯರ್, ಡ್ರೋನ್, ಟ್ರ್ಯಾಕ್ಟರ್ ಮುಂತಾದವುಗಳನ್ನು ನಿಯೋಜನೆ ಮಾಡುತ್ತಿದೆ.
ಮಿಡತೆ ದಾಳಿಯಿಂದ ಸಾವಿರಾರು ಎಕರೆಯಲ್ಲಿ ಬೆಳೆದ ಬೆಳೆಗಳು ನಾಶವಾಗುವ ಅಪಾಯ ಉಂಟಾಗಿದೆ. ಇದನ್ನು ತಪ್ಪಿಸಲು ಕೇಂದ್ರ ಸರಕಾರವು ಹೆಚ್ಚಿನ ಸ್ಪ್ರೇಯರ್ ಖರೀದಿ ಮಾಡಲು, ಡ್ರೋನ್ಗಳನ್ನು ಮತ್ತು ಟ್ರ್ಯಾಕ್ಟರ್ಗಳನ್ನು ಬಳಸಲು ಮುಂದಾಗಿದೆ.
ರಾಜಸ್ಥಾನ, ಗುಜರಾತ್ ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಮಿಡತೆ ದಾಳಿ ಸಮಸ್ಯೆಯನ್ನು ಎದುರಿಸುವ ಸಲುವಾಗಿ ಕೇಂದ್ರ ಸರಕಾರವು ಆಡಳಿತಗಳೊಂದಿಗೆ ಸಹಕರಿಸಲು ತಂಡವನ್ನು ನಿಯೋಜನೆಗೊಳಿಸಿದೆ.
ಮರುಭೂಮಿ ಮಿಡತೆಗಳು ಮೊದಲು ರಾಜಸ್ಥಾನದ ಕೃಷಿಭೂಮಿಗೆ ದಾಳಿ ಮಾಡಿವೆ. ಅಲ್ಲಿಂದ ಮಧ್ಯಪ್ರದೇಶಕ್ಕೆ, ಗುಜರಾತ್ ಮತ್ತು ಮಹಾರಾಷ್ಟ್ರ, ಉತ್ತರ ಪ್ರದೇಶಕ್ಕೆ ಲಗ್ಗೆ ಇಟ್ಟಿವೆ.
ಲೋಕಸ್ಟ್ ವಾರ್ನಿಂಗ್ ಆರ್ಗನೈಜೇಷನ್ (ಎಲ್ ಡಬ್ಲ್ಯೂ ಒ) ಪಂಜಾಬ್ ಮತ್ತು ಹರಿಯಾಣಗಳಲ್ಲೂ ಹೈ ಅಲರ್ಟ್ ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.