ನವದೆಹಲಿ: ಎರಡು ತಿಂಗಳ ಕಾಲ ”ಆತ್ಮನಿರ್ಭರ ಭಾರತ್” ಪ್ಯಾಕೇಜ್ನಡಿ ವಲಸಿಗರಿಗೆ / ಸಿಲುಕಿ ಹಾಕಿಕೊಂಡ ವಲಸಿಗರಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಆಹಾರ ಧಾನ್ಯಗಳನ್ನು ಅಂದಾಜು ಎಂಟು ಕೋಟಿ ವಲಸಿಗರಿಗೆ / ಸಿಲುಕಿಕೊಂಡಿರುವ ವಲಸಿಗರಿಗೆ ತಿಂಗಳಿಗೆ 5 ಕೆಜಿ ಪ್ರಮಾಣದಲ್ಲಿ ಉಚಿತವಾಗಿ ಹಂಚಿಕೆ ಮಾಡಲು ಅನುಮೋದನೆಯನ್ನು ನೀಡಿದೆ.
ಮೇ ಮತ್ತು ಜೂನ್ ಎರಡು ತಿಂಗಳು ಉಚಿತವಾಗಿ ವಲಸಿಗರಿಗೆ ಆಹಾರ ಧಾನ್ಯಗಳನ್ನು ನೀಡಲಾಗುವುದು ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಂದಾಜು 2,982.27 ಕೋಟಿ ರೂಪಾಯಿಗಳ ಆಹಾರ ಸಹಾಯಧನವನ್ನು ಕೇಂದ್ರ ನೀಡಲಿದೆ ಎಂದು ವರದಿಗಳು ತಿಳಿಸಿವೆ.
ಇದಲ್ಲದೆ, ಅಂತರ್-ರಾಜ್ಯ ಸಾರಿಗೆ ಮತ್ತು ನಿರ್ವಹಣಾ ಶುಲ್ಕಗಳು ಮತ್ತು ವ್ಯಾಪಾರಿಗಳ / ಹೆಚ್ಚುವರಿ ವ್ಯಾಪಾರಿ ವೆಚ್ಚವು ಸುಮಾರು 127.25 ಕೋಟಿಗಳಷ್ಟಿದ್ದು, ಅದನ್ನು ಕೇಂದ್ರವು ಸಂಪೂರ್ಣವಾಗಿ ಭರಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅದರಂತೆ ಭಾರತ ಸರ್ಕಾರದಿಂದ ಒಟ್ಟು ಸಬ್ಸಿಡಿ ಸುಮಾರು 3,109.52 ಕೋಟಿ ರೂ.ಸಿಗಲಿದೆ.
ಈ ಹಂಚಿಕೆಯು COVID-19 ನಿಂದ ಉಂಟಾದ ಆರ್ಥಿಕ ಅಡ್ಡಿಗಳಿಂದಾಗಿ ವಲಸಿಗರು ಎದುರಿಸುತ್ತಿರುವ ಕಷ್ಟಗಳನ್ನು ನಿವಾರಿಸುತ್ತದೆ ಎಂದು ಆಹಾರ ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ವ್ಯಾಪ್ತಿಗೆ ಬರದ ಈ ಯೋಜನೆಯ ಲಾಭವು ವಲಸಿಗರಿಗೆ ಮಾತ್ರ ಸಿಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.