ಬೆಂಗಳೂರು: ಕೊರೋನಾ ಸಂಕಷ್ಟ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೂ ತೊಂದರೆಯುಂಟು ಮಾಡಿದೆ. ಸಂಸ್ಥೆಯ ನೌಕರ ವರ್ಗಕ್ಕೂ ಇದರಿಂದ ಸಮಸ್ಯೆ ಉಂಟಾಗಿದ್ದು, ನೌಕರರಲ್ಲಿ ಕೆಲಸ ಮಾಡುವ ಉತ್ಸಾಹವೂ ಕಡಿಮೆಯಾಗುತ್ತಿದೆ. ಈ ಸಂಬಂಧ ನೌಕರರಲ್ಲಿ ಉತ್ಸಾಹ ತುಂಬುವ ಸಲುವಾಗಿ ಪ್ರತಿ ತಿಂಗಳೂ, ಇಂಧನ ಕ್ಷಮತೆ ತೋರುವ ಓರ್ವ ಚಾಲಕರಿಗೆ 10 ಗ್ರಾಂ ಚಿನ್ನದ ಪದಕ ನೀಡಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಲಾಕ್ಡೌನ್ ನಂತರದ ಸಾರಿಗೆ ಸಂಸ್ಥೆಯ ಸ್ಥಿತಿ-ಗತಿಗಳ ಬಗ್ಗೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳ ಜೊತೆಗೆ ಸವದಿ ವಿಡಿಯೋ ಸಂವಾದ ನಡೆಸಿದ್ದು, ಈ ಸಂದರ್ಭದಲ್ಲಿ ಈ ಮಾಹಿತಿ ನೀಡಿದ್ದಾರೆ.
ಕಾರ್ಮಿಕರ ದಿನಾಚರಣೆಯಂದೇ ಈ ಪ್ರಕಟಣೆಯನ್ನು ಸವದಿ ಅವರು ಹೊರಡಿಸಿದ್ದು, ಆ ಮೂಲಕ ನೌಕರರಲ್ಲಿ ಕೆಲಸ ನಿರ್ವಹಿಸಲು ಮತ್ತಷ್ಟು ಹುರುಪು ತುಂಬಿದ್ದಾರೆ. ಜೊತೆಗೆ ಈ ಕಾನ್ಫರೆನ್ಸ್ ಸಭೆಯಲ್ಲಿ ಲಾಕ್ಡೌನ್ ನಂತರ ಸಾರಿಗೆ ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತಂತೆಯೂ ಸವದಿ ಅವರು ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಪ್ರತಿಯೊಂದು ಇಲಾಖೆಯ ಯಶಸ್ಸು, ಕಾರ್ಮಿಕರ ಪರಿಶ್ರಮ, ಕರ್ತವ್ಯ ನಿಷ್ಠೆಯ ಮೇಲೆ ಅವಲಂಬಿತ.
ಸಾರಿಗೆ ಇಲಾಖೆಯ ನನ್ನ ಕಾರ್ಮಿಕ ಬಂಧುಗಳು ಮಾದರಿ ಸೇವೆ ನೀಡುತ್ತಾ ಬಂದಿದ್ದು, 4 ಸಾರಿಗೆ ನಿಗಮಗಳಲ್ಲಿ ಅತೀ ಹೆಚ್ಚು ಇಂಧನ ಕ್ಷಮತೆ ತೋರುವ ಒಬ್ಬ ಚಾಲಕರಿಗೆ ಪ್ರತಿ ತಿಂಗಳು ವೈಯಕ್ತಿಕವಾಗಿ 10 ಗ್ರಾಂ ನ ಚಿನ್ನದ ಮೆಡಲ್ ನೀಡುವುದಾಗಿ ಘೋಷಿಸಿದ್ದೇನೆ pic.twitter.com/L9twapYzlh
— ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi (@LaxmanSavadi) May 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.