ಕೊಯಮತ್ತೂರು: ಇಶಾ ಫೌಂಡೇಶನ್ನ ಸಂಸ್ಥಾಪಕ ಸದ್ಗುರು ಅವರ ಅಮೂರ್ತ ಚಿತ್ರಕಲೆ 5 X 5 ಅಡಿ ಕ್ಯಾನ್ವಾಸ್ 4.14 ಕೋಟಿ ರೂ.ಗೆ ಮಾರಾಟವಾಯಿತು. ಈ ಹಣವನ್ನು ಇಶಾ ಯೋಗ ಕೇಂದ್ರವು ಕೇಂದ್ರದ ಸುತ್ತಮುತ್ತಲಿನ ಗ್ರಾಮೀಣ ತಮಿಳುನಾಡಿನಲ್ಲಿ ಇಶಾ ಫೌಂಡೇಶನ್ ಹಮ್ಮಿಕೊಂಡಿರುವ ಕೊರೋನಾ ಸಾಂಕ್ರಾಮಿಕ ಪರಿಹಾರ ಕಾರ್ಯಗಳಿಗೆ ಒದಗಿಸಲಾಗತ್ತದೆ.
ಸದ್ಗುರು ಇತ್ತೀಚಿನ ಸತ್ಸಂಗದಲ್ಲಿ “ಬೀಟ್ವೈರಸ್” ನಿಧಿಗೆ ಯಾರು ಗರಿಷ್ಠ ಮೊತ್ತವನ್ನು ದಾನ ಮಾಡುತ್ತಾರೋ ಅವರು ಚಿತ್ರಕಲೆ ಪಡೆಯುತ್ತಾರೆ” ಎಂದು ಘೋಷಿಸಿದ್ದರು. “ವರ್ಣಚಿತ್ರದ ಸಣ್ಣ ಪ್ರತಿಗಳು” ಸಹ ಖರೀದಿದಾರರಿಗೆ ಲಭ್ಯವಿರಲಿದೆ ಎಂದಿದ್ದರು.
ಬೀಟ್ವೈರಸ್ ಎಂಬುದು 2 ಲಕ್ಷಕ್ಕೂ ಹೆಚ್ಚು ನಿವಾಸಿಗಳನ್ನು ಹೊಂದಿರುವ ತೋಂಡಮುಥೂರ್ ಬ್ಲಾಕ್ನ ಹಳ್ಳಿಗಳಿಗೆ ಸಾಂಕ್ರಾಮಿಕ ರೋಗ ಪ್ರವೇಶಿಸದಂತೆ ತಡೆಯುವ ಇಶಾದ ಆನ್-ಗ್ರೌಂಡ್ ಅಭಿಯಾನವಾಗಿದೆ.
ಪ್ರತಿದಿನ, ಸುಮಾರು 700 ಇಶಾ ಸ್ವಯಂಸೇವಕರ ಕಾರ್ಯಪಡೆಯು ವಿಕೇಂದ್ರೀಕೃತ ಅಡಿಗೆಮನೆಗಳಲ್ಲಿ ತಯಾರಿಸಿದ ಊಟವನ್ನು ರೋಗ ನಿರೋಧಕ ನೀಲವೆಂಬು ಕಶಾಯಂ ಜೊತೆಗೆ ಗ್ರಾಮಗಳಿಗೆ ತಲುಪಿಸುತ್ತದೆ.
ದೈನಂದಿನ ಈ ಕಾರ್ಯದ ಜೊತೆಗೆ ಸ್ವಯಂಸೇವಕರು ಜಾಗೃತಿ ಕಾರ್ಯ, ಅಗತ್ಯ ವಸ್ತುಗಳ ಪೂರೈಕೆ ಮತ್ತು ಆಡಳಿತಾತ್ಮಕ ಪ್ರಯತ್ನಗಳನ್ನು ಬೆಂಬಲಿಸುತ್ತಿದ್ದಾರೆ ಮತ್ತು ಮುಂಚೂಣಿ ಕೊರೋನಾ ಯೋಧರನ್ನು ರಕ್ಷಣಾತ್ಮಕ ಸಾಧನಗಳೊಂದಿಗೆ ಸಜ್ಜುಗೊಳಿಸುತ್ತಿದ್ದಾರೆ. ಪೂಲುವಪಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್ಸಿ) ಸ್ಥಳೀಯ ಆಡಳಿತವು ಸ್ಟ್ಯಾಂಡ್ಬೈ ಐಸೊಲೇಷನ್ ವಾರ್ಡ್ ಸ್ಥಾಪಿಸಿದೆ. ಇಶಾ ಫೌಂಡೇಶನ್ ಇಲ್ಲಿಗೆ ವೈದ್ಯಕೀಯ ಮೂಲಸೌಕರ್ಯ ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ.
ಇಶಾದ ಸಾಂಕ್ರಾಮಿಕ ಪರಿಹಾರ ಚಟುವಟಿಕೆಗಳು ಪ್ರಾಥಮಿಕವಾಗಿ ಸಮುದಾಯದಲ್ಲಿ ಹಸಿವನ್ನು ತಡೆಗಟ್ಟುವಲ್ಲಿ ಕೇಂದ್ರೀಕರಿಸಿದೆ. ಸಾಂಕ್ರಾಮಿಕವು ಗ್ರಾಮೀಣ ಆರ್ಥಿಕತೆಯನ್ನು ಕುಂಠಿತಗೊಳಿಸಿದೆ ಮತ್ತು ಗ್ರಾಮೀಣ ಭಾರತದಲ್ಲಿ ಲಕ್ಷಾಂತರ ಜನರನ್ನು ಜೀವನೋಪಾಯವಿಲ್ಲದಂತೆ ಮಾಡಿದೆ. ಗ್ರಾಮೀಣ ಜನಸಂಖ್ಯೆಯ ಬಹುಪಾಲು ಜನರು ದೈನಂದಿನ ಕೂಲಿ ಕಾರ್ಮಿಕರು, ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಯಲು ಹೇರಲಾಗಿರುವ ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದ ತೀವ್ರವಾಗಿ ಹೊಡೆತ ತಿನ್ನುತ್ತಿದ್ದಾರೆ.
“ಸರ್ಕಾರ ಮತ್ತು ಆಡಳಿತಗಳು ಸಮಾಜದ ಅತೀ ಬಡವರನ್ನು ತಲುಪಲು ಹೆಚ್ಚಿನದನ್ನು ಮಾಡುತ್ತಿದ್ದರೂ, ಇನ್ನೂ ಅನೇಕರು ಕಷ್ಟಕ್ಕೆ ಸಿಲುಕಿದ್ದಾರೆ. ಯಾರೂ ಹಸಿವಿನಿಂದ ಬಳಲುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ, ” ಎಂದು ಸದ್ಗುರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.