ಬೆಂಗಳೂರು: ಕೊರೋನವೈರಸ್ ಸಂಬಂಧಿತ ಚಟುವಟಿಕೆಗಳಿಗಾಗಿ ವೈದ್ಯರ ಓಡಾಟಕ್ಕಾಗಿ ಕರ್ನಾಟಕ ಸರಕಾರಕ್ಕೆ 500 ಕ್ಯಾಬ್ಗಳನ್ನು ನೀಡಲು ಮುಂದಾಗಿದೆ. ಟ್ವೀಟ್ ಮಾಡುವ ಮೂಲಕ ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವಥನಾರಾಯಣ್ ಈ ವಿಷಯವನ್ನು ದೃಢಪಡಿಸಿದ್ದಾರೆ.
ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿಯಲ್ಲಿ ವೈದ್ಯರಿಗೆ ಓಲಾ ಸೇವೆಗಳು ಲಭ್ಯವಾಗಿರಲಿದೆ. ಪ್ರಾದೇಶಿಕ ಅಗತ್ಯತೆಗೆ ಅನುಗುಣವಾಗಿ ಸರ್ಕಾರವು ಈ ಕ್ಯಾಬ್ಗಳನ್ನು ನಿಯೋಜನೆಗೊಳಿಸಲಿದೆ.
ಆರೋಗ್ಯ ಸೇವಾ ಕಾರ್ಯಕರ್ತರನ್ನು ಕೊಂಡೊಯ್ಯಲು, ಔಷಧಿಗಳನ್ನು ಸಾಗಿಸಲು ಮತ್ತು ಅತ್ಯಗತ್ಯ ವೈದ್ಯಕೀಯ ಪರಿಕರಗಳನ್ನು ರವಾನೆ ಮಾಡಲು ಈ ಕ್ಯಾಬ್ಗಳನ್ನು ಬಳಸಿಕೊಳ್ಳಲಾಗುತ್ತದೆ. ತುರ್ತು ಸೇವೆಗಳಿಗೂ ಇವುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ದೇಶವ್ಯಾಪಿ ಲಾಕ್ ಡೌನ್ ಅನ್ನು ಘೋಷಣೆ ಮಾಡಿದ ಬಳಿಕ ಓಲಾ ತನ್ನ ಕ್ಯಾಪ್ ಸೇವೆಯನ್ನು ನಿಲ್ಲಿಸಿತ್ತು. ತಾನು ಲೀಸ್ಗೆ ಕೊಟ್ಟ ವಾಹನಗಳನ್ನು ಅದು ಚಾಲಕರಿಂದ ಹಿಂಪಡೆದಿತ್ತು. ಇದೀಗ ಅದು ಕರೋನವೈರಸ್ ಸಂಬಂಧಿಸಿದ ಚಟುವಟಿಕೆಗಳಿಗೆ ತನ್ನ ಸೇವೆಯನ್ನು ಒದಗಿಸಲು ಮುಂದಾಗಿದೆ.
ಮಾತ್ರವಲ್ಲದೆ, ಕೊರೋನವೈರಸ್ ಕಾರಣದಿಂದಾಗಿ ತತ್ತರಿಸಿರುವ ತನ್ನ ಚಾಲಕರಿಗೆ ಅದು 30 ಸಾವಿರ ರೂಪಾಯಿಗಳನ್ನು ಕೂಡ ನೀಡಲು ನಿರ್ಧರಿಸಿದೆ.
Olacabs has agreed to give 500 OLA vehicles for #Covid_19 related activities in Karnataka. These vehicles will be used by the government for commute by doctors and Covid 19 related activities. Greatly appreciated move by @olacabs and its CEO @bhash !#IndiaFightsCorona
— Dr. Ashwathnarayan C. N. (@drashwathcn) March 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.