ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಾಗರಹಳ್ಳಿ ಬಳಿಯ ಬೆಟ್ಟದಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಏಸು ಪ್ರತಿಮೆಯನ್ನು ಜಿಲ್ಲಾಡಳಿತದ ಆದೇಶದಂತೆ ತೆರವುಗೊಳಿಸಲಾಗಿದೆ. ಪ್ರತಿಮೆಯನ್ನು ದೊಡ್ಡ ಕ್ರೇನ್ ಮೂಲಕ ತೆಗೆದು ಚರ್ಚ್ಗೆ ಸ್ಥಳಾಂತರ ಮಾಡಲಾಗಿದೆ.
ಸರ್ಕಾರಿ ಜಾಗವಾಗಿರುವ ಬೆಟ್ಟದಲ್ಲಿ ಕೆಲವರು ಅಕ್ರಮವಾಗಿ ಏಸು ಪ್ರತಿಮೆಯನ್ನು, ಶಿಲುಬೆ ನಿರ್ಮಾಣ ಮಾಡಿದ್ದರು, ಮಾತ್ರವಲ್ಲ ಇದಕ್ಕೆ ಮಹಿಮಾ ಬೆಟ್ಟ ಎಂದು ಹೆಸರಿಟ್ಟಿದ್ದರು. ಇಲ್ಲಿ ಪ್ರಾರ್ಥನೆಗಳನ್ನೂ ನಡೆಸಲಾಗಿತ್ತು. ಇದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿತ್ತು.
ಈ ಭೂಮಿ ಸಾರ್ವಜನಿಕ ಸ್ಮಶಾನಕ್ಕೆ ಮಂಜೂರಾಗಿದ್ದು, ಇದನ್ನು ಲಕ್ಷ್ಮೀ ನರಸಿಂಹಸ್ವಾಮಿಬೆಟ್ಟ ಎಂದು ಕರೆಯಲಾಗುತ್ತಿದೆ. ಬೆಟ್ಟದ ಮೇಲಿನ ವಿನಾಯಕ ಹಾಗೂ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಗಳನ್ನು ನಾಶಗೊಳಿಸಿ, ಬೆಟ್ಟವನ್ನು ಸ್ವಾಧೀನಕ್ಕೆ ಪಡೆದು ಅಕ್ರಮ ಗಣಿಗಾರಿಕೆ ನಡೆಸಲಾಗಿದೆ. ಹಿಂದುಗಳ ಜಾಗ ಅತಿಕ್ರಮಿಸಿ, ಕ್ರೖೆಸ್ತ ಮಿಷನರಿಗಳು ಪ್ರತಿಮೆ ಹಾಗೂ ಶಿಲುಬೆಯನ್ನಿಟ್ಟು, ಧಾರ್ವಿುಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಹಿಂದೂಪರ ಸಂಘಟನೆಗಳು ಎಚ್ಚರಿಸಿದ್ದವು.
ಇದರಿಂದ ಎಚ್ಚೆತ್ತ ದೇವನಹಳ್ಳಿ ತಹಶೀಲ್ದಾರ್ ಏಸು ಪ್ರತಿಮೆ ತೆರವು ಕಾರ್ಯವನ್ನು ನಡೆಸಿದರು.
ಕನಕಪುರದ ಕಪಾಲ ಬೆಟ್ಟದಲ್ಲಿ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರು ಏಸು ಪ್ರತಿಮೆ ಮಾಡಲು ನಿರ್ಧರಿಸಿದ್ದು ದೊಡ್ಡ ಮಟ್ಟದಲ್ಲೇ ವಿವಾದವನ್ನು ಹುಟ್ಟಿ ಹಾಕಿದೆ. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ದೊಡ್ಡಸಾಗರಹಳ್ಳಿ ಬಳಿಯ ಬೆಟ್ಟದ ಏಸು ಪ್ರತಿಮೆಯನ್ನು ತೆರವು ಮಾಡಲು ಮುಂದಾಯಿತು.
ದೊಡ್ಡಬಳ್ಳಾಪುರ ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸರು, ಕ್ರೇನ್ ಹಾಗೂ ಟಿಪ್ಪರ್ಗಳ ಮೂಲಕ ಬೆಳಗಿನ ಜಾವ ಗ್ರಾಮಕ್ಕೆ ಆಗಮಿಸಿ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಬೆಟ್ಟದ ಮೇಲಿನ ಏಸು ಪ್ರತಿಮೆ ತೆರವು ಮಾಡಿದರು. ತೆರವು ಮಾಡಿದ ಏಸು ಪ್ರತಿಮೆಯನ್ನು ಟಿಪ್ಪರ್ ಮೂಲಕ ಗ್ರಾಮದಲ್ಲಿನ ಚರ್ಚ್ಗೆ ಸ್ಥಳಾಂತರಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.