ಚೆನ್ನೈ: ಕಡಲ ಗಸ್ತು ನೌಕೆ ‘ವರದ್’ ಅನ್ನು ಚೆನ್ನೈನ ಕಟ್ಟುಪಲ್ಲಿ ಬಂದರಿನಲ್ಲಿ ಕರಾವಳಿ ರಕ್ಷಣಾ ಪಡೆಗೆ ಶುಕ್ರವಾರ ನಿಯೋಜನೆಗೊಳಿಸಲಾಯಿತು. ಕೇಂದ್ರ ಶಿಪ್ಪಿಂಗ್ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಮನ್ಸುಖ್ ಮಾಂಡವಿಯಾ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ನಿಯೋಜನೆಗೊಳಿಸಲಾಯಿತು.
‘ವರದ್’ ಎಂದರೆ ಆಶೀರ್ವಾದ ನೀಡುವ ಎಂದರ್ಥ, ಗಣೇಶನನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಇದನ್ನು ಚೆನ್ನೈ ಬಳಿಯ ಕಟ್ಟುಪಲ್ಲಿ ಶಿಪ್ಯಾರ್ಡ್ ಲಾರ್ಸೆನ್ ಮತ್ತು ಟೌಬ್ರೊ (ಎಲ್ & ಟಿ) ಹಡಗು ನಿರ್ಮಾಣದಲ್ಲಿ ನಿರ್ಮಾಣ ಮಾಡಲಾಗಿದೆ. ಕರಾವಳಿ ಕಾವಲುಗಾರರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಮತ್ತು ನಿರ್ಮಿಸಲಾದ ‘ವರದ್’ ಸರಣಿಯ ಏಳು ಹಡಗುಗಳ ಪೈಕಿ ಇದು 5 ನೆಯದಾಗಿದೆ.
98 ಮೀಟರ್ ಉದ್ದದ ಹಡಗು 2100 ಟನ್ಗಳಷ್ಟು ಡಿಸ್ಪ್ಲೇಸ್ಮೆಂಟ್ ಅನ್ನು ಹೊಂದಿದೆ, 26 ನಾಟ್ಸ್ ವೇಗವನ್ನು ಹೊಂದಿದೆ, 5000 ನಾಟಿಕಲ್ ಮೈಲುಗಳ ಸಾಮರ್ಥ್ಯವನ್ನು ಹೊಂದಿದೆ ಮತ್ತು ಮರುಪೂರಣವಿಲ್ಲದೆ 20 ದಿನಗಳ ಕಾಲ ಸಮುದ್ರದಲ್ಲಿ ಉಳಿಯುವ ಸಾಮರ್ಥ್ಯವನ್ನು ಹೊಂದಿದೆ.
ಹಡಗಿನಲ್ಲಿ ಸುಧಾರಿತ ನಾವಿಗೇಶನ್ ಮತ್ತು ಸಂವಹನ ಸಾಧನಗಳು, ಸಂವೇದಕಗಳು ಮತ್ತು ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಇದು ಹಡಗಿನ ಹೋರಾಟದ ದಕ್ಷತೆಗಾಗಿ 30 ಎಂಎಂ CRN-91 ನಾವೆಲ್ ಗನ್ ಮತ್ತು ಫೈರ್ ಕಂಟ್ರೋಲ್ ಸಿಸ್ಟಮ್ನೊಂದಿಗೆ ಎರಡು 12.7 ಎಂಎಂ ಬಂದೂಕುಗಳನ್ನು ಹೊಂದಿದೆ.
ಅವಳಿ-ಎಂಜಿನ್ ಲೈಟ್ ಹೆಲಿಕಾಪ್ಟರ್ ಅನ್ನು ಸಾಗಿಸಲು ಹಡಗನ್ನು ವಿನ್ಯಾಸಗೊಳಿಸಲಾಗಿದೆ, ಇದು ವ್ಯಾಪಕ ಶ್ರೇಣಿಯ ಕಾರ್ಯಾಚರಣೆಗಳಿಗೆ ಅದರ ವ್ಯಾಪ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಸ್ವಿಫ್ಟ್ ಬೋರ್ಡ್ ಮತ್ತು ಶೋಧ ಕಾರ್ಯಾಚರಣೆಗಳು, ಕಣ್ಗಾವಲು, ಕಾನೂನು ಪಾಲನೆ ಮತ್ತು ಕಡಲ ಗಸ್ತನ್ನು ಸಕ್ರಿಯಗೊಳಿಸಲು ಎರಡು ರಿಜಿಡ್ ಹಲ್ ಇನ್ಫ್ಲ್ಯಾಟೇಬಲ್ ಬೋಟ್ ಸೇರಿದಂತೆ ನಾಲ್ಕು ಹೈಸ್ಪೀಡ್ ದೋಣಿಗಳನ್ನು ಈ ಹಡಗು ಹೊಂದಿದೆ. ಹಡಗು ಸಮುದ್ರದಲ್ಲಿ ಚಲಿಸುವಾಗಲೂ ದೋಣಿಗಳನ್ನು ನೀರಿನಲ್ಲಿ ಇಳಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.