ತಿರುವನಂತಪುರಂ : ಕೇರಳ ಸರ್ಕಾರ ಕೊರೋನವೈರಸ್ ಅನ್ನು ರಾಜ್ಯ ವಿಪತ್ತು ಎಂದು ಘೋಷಿಸಿದೆ. ಆರೋಗ್ಯ ಸಚಿವ ಕೆ. ಕೆ. ಶೈಲಜಾ ಸೋಮವಾರ, “ಕೇರಳ ಇಂದು ಎನ್-ಕರೋನವೈರಸ್ ಅನ್ನು ರಾಜ್ಯ ವಿಪತ್ತು ಎಂದು ಘೋಷಿಸಿದೆ. ನಮ್ಮ ಕಣ್ಗಾವಲು ವ್ಯವಸ್ಥೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಬಲಪಡಿಸಲು ನಾವು ಬಯಸುತ್ತೇವೆ” ಎಂದು ಹೇಳಿದ್ದಾರೆ.
“ಚೀನಾದಲ್ಲಿ ಎನ್-ಕೊರೊನಾವೈರಸ್ ವಿಪರೀತ ಮಟ್ಟವನ್ನು ತಲುಪಿದೆ ಎಂದು ನಮಗೆ ತಿಳಿದು ಬಂದಿದೆ, ಈ ವೈರಸ್ ವಿರುದ್ಧ ಹೋರಾಡಲು ನಾವು ನಮ್ಮದೇ ಆದ ವ್ಯವಸ್ಥೆಯನ್ನು ಬಳಸುತ್ತಿದ್ದೇವೆ. ಚೀನಾದಲ್ಲಿ ಕೇರಳದ ಅನೇಕ ವಿದ್ಯಾರ್ಥಿಗಳು ಇದ್ದಾರೆ. ಅವರು ಹಿಂತಿರುಗುತ್ತಿದ್ದಾರೆ, ಹೀಗಾಗಿ ಕೊರೋನವೈರಸ್ ರಾಜ್ಯದ ಮೇಲೆ ಪರಿಣಾಮ ಬೀರಬಹುದು ಎಂದು ನಾವು ಈಗಾಗಲೇ ನಿರೀಕ್ಷಿಸಿದ್ದೇವೆ. ನಾವು ಇಲ್ಲಿಯವರೆಗೆ ಮೂರು ಕರೋನವೈರಸ್ ಪ್ರಕರಣವನ್ನು ಪತ್ತೆ ಮಾಡಿದ್ದೇವೆ. ಈ ಮಾದರಿಗಳನ್ನು ಪರೀಕ್ಷಿಸಲು ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ನಾವು ಆರೋಗ್ಯ ಅಧಿಕಾರಿಗಳನ್ನು ರಜೆಯಿಂದ ವಾಪಸ್ ಕರೆಸಿಕೊಳ್ಳುತ್ತಿದ್ದೇವೆ ಮತ್ತು ಈ ವೈರಸ್ ವಿರುದ್ಧ ಸಮರ್ಥವಾಗಿ ಹೋರಾಡಲು ಎಲ್ಲಾ ಕ್ರಮಗಳನ್ನು ಜಾರಿಗೆ ತರುತ್ತಿದ್ದೇವೆ ” ಎಂದು ಶೈಲಾಜಾ ಹೇಳಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ಕೊರೋನವೈರಸ್ನ ಮೂರನೇ ಪ್ರಕರಣ ಪತ್ತೆಯಾದ ನಂತರ ಕೇರಳ ಇದನ್ನು ರಾಜ್ಯ ವಿಪತ್ತು ಎಂದು ಘೋಷಣೆ ಮಾಡಿದೆ. “ಮೂರನೇ ಪ್ರಕರಣ ಕಾಸರಗೋಡಿನಲ್ಲಿ ಪತ್ತೆಯಾಗಿದೆ. ರೋಗಿಯು ಕಾಸರಗೋಡಿನ ಕಾಂಜ್ಞಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಯ ಸ್ಥಿತಿ ಸ್ಥಿರವಾಗಿದೆ. ವಿದ್ಯಾರ್ಥಿಯು ವುಹಾನ್ನಿಂದ ಹಿಂದಿರುಗಿದ್ದರು” ಎಂದು ಶೈಲಾಜಾ ಹೇಳಿದ್ದಾರೆ. ಮೊದಲ ಪ್ರಕರಣ ತ್ರಿಶೂರಿನಲ್ಲಿ ಪತ್ತೆಯಾಗಿದೆ, ಎರಡನೇ ಪ್ರಕರಣ ಅಲಫುಝಾದಲ್ಲಿ ಪತ್ತೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.