ಇಸ್ಲಾಮಾಬಾದ್: ತನ್ನ ಆಪ್ತ ಮಿತ್ರ ಚೀನಾಗೆ ಐಕಮತ್ಯವನ್ನು ತೋರಿಸಲು ಕೊರೋನವೈರಸ್ ಪೀಡಿತ ವುಹಾನ್ ನಗರದಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸದಿರಲು ಪಾಕಿಸ್ಥಾನ ಸರ್ಕಾರ ನಿರ್ಧರಿಸಿದೆ ಎಂದು ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಪ್ರಕಟಿಸಿದ್ದಾರೆ.
ನಾಲ್ಕು ಪಾಕಿಸ್ಥಾನಿ ಪ್ರಜೆಗಳು ಚೀನಾದಲ್ಲಿ ಈ ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದಾರೆ. ಆದರೂ ಪಾಕಿಸ್ಥಾನ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ
ವುಹಾನ್ನ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ 800 ಪಾಕಿಸ್ಥಾನಿಗಳು ಅಧ್ಯಯನ ಮಾಡುತ್ತಿದ್ದಾರೆ. ಇದು 11 ದಶಲಕ್ಷ ಜನರ ನಗರವಾಗಿದೆ. ಸುಮಾರು 8,000 ಜನರಿಗೆ ಚೀನಾದಲ್ಲಿ ವೈರಸ್ ತಗುಲಿದೆ, 370ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಮಾರಣಾಂತಿಕ ವೈರಸ್ನ ಹರಡುವಿಕೆಯನ್ನು ತಡೆಯುವ ಪ್ರಯತ್ನದಲ್ಲಿ ಚೀನಾದ ಅಧಿಕಾರಿಗಳು ತೊಡಗಿದ್ದರು ಯಾವುದೇ ಪ್ರಯೋಜನವಾಗುತ್ತಿಲ್ಲ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಶಿಫಾರಸುಗಳಿಗೆ ಅನುಸಾರವಾಗಿ ಪಾಕಿಸ್ಥಾನ ತನ್ನ ಪ್ರಜೆಗಳನ್ನು ಚೀನಾದಿಂದ ಸ್ಥಳಾಂತರಿಸದಿರಲು ನಿರ್ಧರಿಸಿದೆ ಎಂದು ಅಲ್ಲಿನ ಆರೋಗ್ಯ ಕುರಿತ ಪ್ರಧಾನ ಮಂತ್ರಿ ವಿಶೇಷ ಸಲಹೆಗಾರ ಡಾ. ಜಾಫರ್ ಮಿರ್ಜಾ ತಿಳಿಸಿದ್ದಾರೆ.
“ಇದು ಚೀನಾದಲ್ಲಿರುವ ನಮ್ಮ ಪ್ರೀತಿಪಾತ್ರರ ಹಿತದೃಷ್ಟಿಯಿಂದಲೇ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ನಮ್ಮ ಪ್ರದೇಶ, ಪ್ರಪಂಚ, ದೇಶದ ಅತಿದೊಡ್ಡ ಹಿತದೃಷ್ಟಿಯಿಂದ ನಾವು ಅವರನ್ನು ಈಗ ಇಲ್ಲಿಗೆ ಸ್ಥಳಾಂತರಿಸುವುದಿಲ್ಲ” ಎಂದಿದ್ದಾರೆ.
ಅಲ್ಲದೇ, “ಬದುಕು ಮತ್ತು ಸಾವು ಅಲ್ಲಾಹುವಿನ ಕೈಯಲ್ಲಿದೆ, ಅವರು ಇಲ್ಲಿಗೆ ಬಂದರೂ ಅಲ್ಲೇ ಇದ್ದರೂ ಸಾವು, ಬದುಕು ಅಲ್ಲಾನ ಇಚ್ಛೆ” ಎಂದು ಸರ್ಕಾರದ ಪ್ರತಿನಿಧಿಯೊಬ್ಬರು ಚೀನಾದಲ್ಲಿರುವ ಪಾಕ್ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ.
ಪಾಕಿಸ್ಥಾನದ ಧೋರಣೆಗೆ ವಿಶ್ವವ್ಯಾಪಿಯಾಗಿ ಖಂಡನೆಗಳು ವ್ಯಕ್ತವಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.