ತಿರುವನಂಪತಪುರಂ: ಕೇರಳ ಸರ್ಕಾರದ ವಿರುದ್ಧ ಕಿಡಿಕಾರಿರುವ ಅಲ್ಲಿನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು, ನಾನು ರಬ್ಬರ್ ಸ್ಟ್ಯಾಂಪ್ ಅಲ್ಲ ಮತ್ತು ನಾನು ನನ್ನ ಬುದ್ಧಿ ಉಪಯೋಗಿಸಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಕೇರಳ ಸಚಿವ ಸಂಪುಟ ಅನುಮೋದಿಸಿದ ಸುಗ್ರೀವಾಜ್ಞೆಗೆ ಸಹಿ ಹಾಕಲು ಅವರು ನಿರಾಕರಿಸಿದ್ದಾರೆ ಎಂಬ ವರದಿಗಳು ಹೊರಬಿದ್ದ ನಂತರ ಖಾನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಿದ್ದರು.
“ರಾಜ್ಯಪಾಲ ರಬ್ಬರ್ ಸ್ಟಾಂಪ್ ಆಗಿರಬೇಕು ಎಂದು ಸಂವಿಧಾನವು ನಿರೀಕ್ಷಿಸುವುದಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ನಾನು ನನ್ನ ಬುದ್ಧಿಯನ್ನು ಅನ್ವಯಿಸುತ್ತೇನೆ. ಸುಗ್ರೀವಾಜ್ಞೆಯ ಬಗ್ಗೆ ತಿಳಿಯಲು ನನಗೆ ಸಮಯ ಬೇಕಾಗುತ್ತದೆ. ವಿಧಾನಸಭೆ ಅಧಿವೇಶನ ಶೀಘ್ರದಲ್ಲೇ ಆರಂಭವಾಗುತ್ತಿರುವುದರಿಂದ ಸುಗ್ರೀವಾಜ್ಞೆಯ ಅಗತ್ಯವೇನಿತ್ತು? ನಾನು ಕೆಲವು ಪ್ರಶ್ನೆಗಳನ್ನು ಎತ್ತಿದ್ದೇನೆ ಮತ್ತು ನಾನು ಉತ್ತರಗಳನ್ನು ಪಡೆಯಬೇಕಾಗಿದೆ ಮತ್ತು ಅದರ ನಂತರ ನಾನು ನನ್ನ ಬುದ್ಧಿಯನ್ನು ಅನ್ವಯಿಸುತ್ತೇನೆ. ನಾನು ಸಹಿ ಮಾಡುವುದಿಲ್ಲ ಎಂದು ನಾನು ಎಂದಿಗೂ ಹೇಳಲಿಲ್ಲ” ಎಂದು ಖಾನ್ ಹೇಳಿದ್ದಾರೆ.
ಅವರು ಸಹಿ ಮಾಡದಿದ್ದರೆ ಸರ್ಕಾರ ಅದನ್ನು ಅವರಿಗೆ ಹಿಂದಿರುಗಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಖಾನ್, “ಯಾರು ಹಾಗೆ ಹೇಳಿದ್ದು, ಅಂತಹದ್ದೇನೂ ಇಲ್ಲ” ಎಂದಿದ್ದಾರೆ.
ಪಿನರಾಯಿ ವಿಜಯನ್ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ತೆಗೆದುಕೊಳ್ಳುತ್ತಿರುವ ನಿಲುವುಗಳ ಬಗ್ಗೆಯೂ ಆರೀಫ್ ಖಾನ್ ಖಂಡನೆ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಸಿಎಎಯನ್ನು ಪ್ರಶ್ನಿಸಿದ್ದಕ್ಕೆ ಪಿನರಾಯಿ ವಿಜಯನ್ ಸರ್ಕಾರದ ಮೇಲೂ ಅವರು ವಾಗ್ದಾಳಿಯನ್ನು ನಡೆಸಿದ್ದಾರೆ.
“ಕಾನೂನುಬದ್ಧ ನ್ಯಾಯ ಇದೆ, ನಾನೂ ಅಥವಾ ಯಾರೊಬ್ಬರೂ ಕಾನೂನಿನಿಂದ ಮೇಲಲ್ಲ. ನ್ಯಾಯಾಂಗದ ಬಳಿ ಹೋಗುವ ಯಾರನ್ನೂ ನಾನು ವಿರೋಧಿಸುವುದಿಲ್ಲ. ಆದರೆ, ನಾನು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥನಾಗಿರುವುದರಿಂದ ರಾಜ್ಯ ಸರ್ಕಾರ ಈ ಬಗ್ಗೆ ನನಗೆ ಮಾಹಿತಿ ನೀಡಬೇಕಾಗಿತ್ತು , ಆದರೆ ನಾನು ಪತ್ರಿಕೆಗಳ ಮೂಲಕ ತಿಳಿದುಕೊಂಡೆ. ಇಲ್ಲಿರುವ ಕೆಲವರು, ಅವರು ಕಾನೂನಿನಿಂದ ಮೇಲಿದ್ದಾರೆ ಎಂದು ಭಾವಿಸುತ್ತಾರೆ “ಎಂದು ಖಾನ್ ಹೇಳಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.