ನವದೆಹಲಿ: ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ತೀರ್ಪು ಪ್ರಕಟವಾಗುವ ಸಮಯದಲ್ಲಿ ಮತ್ತು ನಂತರ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರವು ಆ ರಾಜ್ಯಕ್ಕೆ ಸುಮಾರು 4000 ಹೆಚ್ಚುವರಿ ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ಕಳುಹಿಸಿಕೊಡುತ್ತಿದೆ.
ಗೃಹ ಸಚಿವಾಲಯವು ಸೋಮವಾರ 15 ಅರೆಸೈನಿಕ ಪಡೆಗಳ ಕಂಪನಿಗಳನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿಕೊಟ್ಟಿದೆ, ಅದು ನವೆಂಬರ್ 18 ರ ವರೆಗೆ ರಾಜ್ಯದಲ್ಲಿಯೇ ಇರಲಿದೆ. ಮೂಲಗಳ ಪ್ರಕಾರ, ನವೆಂಬರ್ 17 ರ ಮೊದಲೇ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸುವ ನಿರೀಕ್ಷೆಯಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರು ನ. 18 ರಂದು ನಿವೃತ್ತರಾಗಲಿದ್ದಾರೆ.
ವರದಿಯ ಪ್ರಕಾರ, ಅರೆಸೇನಾ ಪಡೆಗಳ 15 ಕಂಪನಿಗಳಿಗೆ ಉತ್ತರ ಪ್ರದೇಶಕ್ಕೆ ತೆರಳಲು ಅನುಮತಿ ನೀಡಲಾಗಿದೆ. ಬಿಎಸ್ಎಫ್, ಆರ್ಎಎಫ್, ಸಿಐಎಸ್ಎಫ್, ಐಟಿಬಿಪಿ ಮತ್ತು ಎಸ್ಎಸ್ಬಿ ತಲಾ ಮೂರು ಕಂಪನಿಗಳು ಅಲ್ಲಿಗೆ ತೆರಳಲಿವೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ನ ಇನ್ನೂ 15 ಕಂಪನಿಗಳು ನವೆಂಬರ್ 11ರಿಂದ ಉತ್ತರ ಪ್ರದೇಶವನ್ನು ನವೆಂಬರ್ 18ರವರೆಗೆ ಅಲ್ಲೇ ಉಳಿಯಲಿದೆ. ಈಗಾಗಲೇ ಅಲ್ಲಿ ನಿಯೋಜನೆಗೊಂಡಿರುವ ರಾಪಿಡ್ ಆಕ್ಷನ್ ಫೋರ್ಸ್ನ ಹತ್ತು ಕಂಪನಿಗಳಿಗೆ ಕೇಂದ್ರ ಸರ್ಕಾರ ನವೆಂಬರ್ 18 ರವರೆಗೆ ಅಲ್ಲಿರುವಂತೆ ಸೂಚಿಸಿದೆ.
ವಾರಣಾಸಿ ಮತ್ತು ಅಯೋಧ್ಯೆ ಮಾತ್ರವಲ್ಲದೇ, ಅರೆಸೈನಿಕ ಪಡೆಗಳನ್ನು ಕಾನ್ಪುರ, ಅಲಿಗಢ, ಲಕ್ನೋ, ಅಜಂಗಢ ಇತ್ಯಾದಿಗಳಲ್ಲಿ ನಿಯೋಜಿಸಲಾಗುತ್ತಿದೆ. ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲು ವ್ಯವಸ್ಥೆ ಮಾಡುವಂತೆ ಸ್ಥಳೀಯ ಆಡಳಿತಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.