ಜೈಪುರ: ರಾಜಸ್ಥಾನದ ಜೈಪುರ ಮೂಲದ ಕಲಾವಿದ ಶರದ್ ಮಾಥುರ್ ಎಂಬುವವರು ಪೇಂಟ್ಬ್ರಷ್ ಮೂಲಕ 3,000 ಕ್ಕೂ ಹೆಚ್ಚು ಪುಟಗಳಲ್ಲಿ “ರಾಮಚರಿತಮಾನಸ” ಅನ್ನು ಬರೆದು ಎಲ್ಲರ ಗಮನವನ್ನು ಸೆಳೆದಿದ್ದಾರೆ. ತಾವು ಬರೆದಿರುವ ಈ ‘ರಾಮಚರಿತಮಾನಸ’ವನ್ನು ಅವರು ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮ ಮಂದಿರಕ್ಕೆ ಕೊಡುಗೆಯಾಗಿ ನೀಡಲು ಬಯಸುತ್ತಿದ್ದಾರೆ.
“ಶ್ರೀರಾಮನಿಗೆ ಪ್ರಾರ್ಥನೆಯನ್ನೂ ಮೀರಿ ಏನನ್ನಾದರೂ ಅರ್ಪಣೆ ಮಾಡಲು ಬಯಸುತ್ತಿದ್ದೆ. ಅದರಂತೆ ರಾಮಚರಿತಮಾನಸವನ್ನು ದೊಡ್ಡ ಫಾಂಟ್ಗಳಲ್ಲಿ ಪೇಂಟ್ ಮತ್ತು ಬ್ರಷ್ ಮೂಲಕ ಬರೆಯುವ ಆಲೋಚನೆ ಮೂಡಿತು. ಪ್ರತಿಯೊಂದು ಪದವು 1-1.5 ಇಂಚು ಅಳತೆಯಲ್ಲಿದೆ. ಪುಸ್ತಕ ಸುಮಾರು 150 ಕೆಜಿ ತೂಗುತ್ತದೆ” ಎಂದು ಶರದ್ ಹೇಳಿದ್ದಾರೆ.
ಈ ಪುಸ್ತಕವನ್ನು ತಾಂತ್ರಿಕ ಕಾರಣಗಳಿಂದಾಗಿ ಯಾರೂ ಬೈಂಡಿಂಗ್ ಮಾಡಲು ಮುಂದಾಗಲಿಲ್ಲ. ಆದರೆ ಮುಬಾರಕ್ ಖಾನ್ ಅವರು ಮುಂದೆ ಬಂದು ಬೈಂಡ್ ಮಾಡಿಕೊಟ್ಟರು. ನನ್ನ ಕಾರ್ಯವನ್ನು ಯಾರೂ ಪ್ರಶಂಸಿಲು ಮುಂದಾಗಿರಲಿಲ್ಲ, ಆದರೆ ಮುಬಾರಕ್ ಅವರು ನನಗೆ ಅತೀವ ಸಹಾಯ ಮಾಡಿದರು, ಕೋಮು ಸೌಹಾರ್ದತೆಯ ದ್ಯೋತಕವಿದು ಎಂದು ಶರದ್ ಹೇಳಿಕೊಂಡಿದ್ದಾರೆ.
ಶರದ್ ಅವರು ಶಾಲಾ ಮಕ್ಕಳಿಗೆ ಸಂಗೀತವನ್ನು ಹೇಳಿಕೊಡುತ್ತಿದ್ದಾರೆ. ಭಜನೆ ಹೇಳುವುದು ಇವರ ನಿತ್ಯದ ಕಾರ್ಯ. ‘ರಾಮಚರಿತಮಾನಸವನ್ನು ಬರೆಯಲು ಅವರು 6 ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ. ನಿತ್ಯ 5-6 ಗಂಟೆಗಳ ಸಮಯವನ್ನು ಅವರು ಇದಕ್ಕಾಗಿ ವಿನಿಯೋಗಿಸಿದ್ದರು.
ಅಯೋಧ್ಯಾದಲ್ಲಿ ಒಂದು ಬಾರಿ ರಾಮಮಂದಿರ ನಿರ್ಮಾಣವಾದರೆ, ಅಲ್ಲಿಗೆ ತೆರಳಿ ತಾನು ರಚಿಸಿದ ರಾಮಚರಿತಮಾನಸವನ್ನು ಅರ್ಪಣೆ ಮಾಡಲುಬಯಸುತ್ತಿರುವುದಾಗಿ ಅವರು ಹೇಳಿದ್ದಾರೆ. ಮುಂದೆ ಸುಂದರಕಾಂಡವನ್ನೂ ಕೈಬರಹದ ಮೂಲಕ ಬರೆದು ಅದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ನೀಡುವ ಕನಸು ಇವರಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.