ನವದೆಹಲಿ: ದೇಶಭಕ್ತ ಸಂತ ಸ್ವಾಮಿ ವಿವೇಕಾನಂದರ 113ನೇ ಪುಣ್ಯ ತಿಥಿಯ ಅಂಗವಾಗಿ ಶನಿವಾರ ದೇಶದಾದ್ಯಂತ ಆ ಮಹಾನ್ ಚೇತನಕ್ಕೆ ನಮನಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ. ಅವರ ಹೆಸರಲ್ಲಿ ಹಲವಾರು ಸಮಾರಂಭಗಳನ್ನು ನಡೆಸಲಾಗುತ್ತಿದೆ.
ವಿವೇಕಾನಂದರಿಂದ ಪ್ರೇರಣೆ ಪಡೆದಿರುವ ಪ್ರಧಾನಿ ನರೇಂದ್ರ ಮೋದಿಯವರೂ ವಿವೇಕಾನಂದರ ನಿರ್ವಾಣ್ ದಿವಸ್ ಅಂಗವಾಗಿ ಅವರಿಗೆ ನಮನಗಳನ್ನು ಸಲ್ಲಿಸಿದ್ದಾರೆ,
‘ವಿವೇಕಾನಂದರು ಪ್ರೇರಣೆಯ ಮೂಲ, ಅವರ ಸಿದ್ಧಾಂತಗಳು ಜಗತ್ತಿನ ಹಲವಾರು ಮಂದಿಯ ಮೇಲೆ ಪ್ರಭಾವ ಬೀರಿದೆ. ಅವರ ನಿರ್ವಾಣ್ ದಿವಸದ ಅಂಗವಾಗಿ ಅವರಿಗೆ ನನ್ನ ನಮನಗಳು’ ಎಂದಿದ್ದಾರೆ.
ವೇದಾಂತದ ಸಿಡಿಲಮರಿ ಎಂದೇ ಕರೆಯಲ್ಪಡುವ ವಿವೇಕಾನಂದರು ಹಿಂದೂ ಧರ್ಮದ ಸಾರವನ್ನು ಜಗತ್ತಿಗೆ ಪಸರಿಸಿದರು. ಭಾರತೀಯರಲ್ಲಿ ದೇಶಭಕ್ತಿಯ ಕಿಚ್ಚನ್ನು ಹತ್ತಿಸಿದವರು. ಇಂದಿಗೂ ವಿವೇಕಾನಂದದ ಸಿದ್ಧಾಂತಗಳು ಪ್ರಸ್ತುತವಾಗಿವೆ. ಜುಲೈ 4, 1902ರಂದು ಇವರು ಅಸ್ತಂಗತರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.