ನವದೆಹಲಿ: ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಪಿಂಚಣಿ ಯೋಜನೆಗೆ ಸುಮಾರು 31 ಲಕ್ಷ ಜನರು ಸೇರ್ಪಡೆಗೊಂಡಿದ್ದಾರೆ. ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾನ್ಧನ್ (ಪಿಎಂ-ಎಸ್ವೈಎಂ) ಪ್ರಾರಂಭವಾದ ಐದು ತಿಂಗಳಲ್ಲೇ ಭಾರೀ ಯಶಸ್ಸನ್ನು ಕಂಡಿದೆ.
ಫೆಬ್ರವರಿ 15 ರಂದು ಪ್ರಾರಂಭವಾದ ಈ ಯೋಜನೆಯು ಕೇಂದ್ರ ಸಚಿವ ಪಿಯೂಷ್ ಗೋಯಲ್ ಘೋಷಿಸಿದ ಮಧ್ಯಂತರ ಬಜೆನ್ನ ಭಾಗವಾಗಿತ್ತು. ಸ್ವಯಂಪ್ರೇರಿತವಾಗಿರುವ ಈ ಯೋಜನೆಯು ಜುಲೈ 10 ರವರೆಗೆ 30.85 ಲಕ್ಷ ನೋಂದಣಿಗಳನ್ನು ಪಡೆದುಕೊಂಡಿದೆ. ಈ ಯೋಜನೆಯನ್ನು ಜೀವ ವಿಮಾ ನಿಗಮ (ಎಲ್ಐಸಿ) ಮೂಲಕ ಜಾರಿಗೆ ತರಲಾಗಿದೆ.
ಕೆಲಸ ಮಾಡುವ ವಯಸ್ಸನ್ನು ದಾಟಿದ ನಂತರ ಯಾವುದೇ ಜೀವನೋಪಾಯವನ್ನು ಹೊಂದಿರದ ಮತ್ತು ತಮ್ಮ ಅಗತ್ಯಗಳಿಗಾಗಿ ಕುಟುಂಬ ಮತ್ತು ಸಮಾಜದ ಮೇಲೆ ಅವಲಂಬಿತವಾಗಿರಬೇಕಾದ ಅಸಂಘಟಿತ ವಲಯದ ದೊಡ್ಡ ಪ್ರಮಾಣದ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ತಿಂಗಳಿಗೆ 15000 ರೂ.ಗಿಂತ ಕಡಿಮೆ ಆದಾಯವನ್ನು ಪಡೆಯುವ ಮತ್ತು ಎನ್ಪಿಎಸ್ನಂತಹ ಇತರ ಪಿಂಚಣಿ ಯೋಜನೆಗಳಿಗೆ ಒಳಪಡದ ಕಾರ್ಮಿಕರಿಗೆ ಈ ಯೋಜನೆ ಮುಕ್ತವಾಗಿದೆ.
18-40 ವಯಸ್ಸಿನ ಕಾರ್ಮಿಕರು ಈ ಯೋಜನೆಗೆ ನೋಂದಣಿಯಾಗಬಹುದಾಗಿದೆ. ಅವರು 60 ವರ್ಷ ದಾಟಿದ ನಂತರ ತಿಂಗಳಿಗೆ 3000 ರೂ.ಗಳ ಪಿಂಚಣಿ ದೊರೆಯುತ್ತದೆ. ಈ ಯೋಜನೆಯಡಿಯಲ್ಲಿ, ನೋಂದಾಯಿತರು ಮಾಸಿಕವಾಗಿ ನಿಗದಿತ ಕೊಡುಗೆ ಮೊತ್ತವನ್ನು ಪಾವತಿಸಬೇಕಾಗುತ್ತದೆ ಮತ್ತು ಕೇಂದ್ರ ಸರ್ಕಾರವು ಈ ಮೊತ್ತಕ್ಕೆ ಸಮಾನ ಹೊಂದಾಣಿಕೆಯ ಕೊಡುಗೆಯನ್ನು ಪಿಂಚಣಿಯಾಗಿ ನೀಡುತ್ತದೆ. ವ್ಯಕ್ತಿಯ ಕೊಡುಗೆಯು ಆತನ ಯೋಜನೆಗೆ ಸೇರುವ ವಯಸ್ಸನ್ನು ಅವಲಂಬಿಸಿರುತ್ತದೆ.
ಈ ಯೋಜನೆಗೆ ಹರಿಯಾಣದಿಂದ ಅತ್ಯಧಿಕ ಜನರು ಸೇರ್ಪಡೆಗೊಂಡಿದ್ದಾರೆ. ಸುಮಾರು 6 ಲಕ್ಷ ಜನರು ಈಗಾಗಲೇ ಅಲ್ಲಿ ನೋಂದಾಯಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.