ನವದೆಹಲಿ: ನವೋದಯ ವಿದ್ಯಾಲಯಗಳ ಮಾದರಿಯಲ್ಲೇ ದೇಶದ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ ಏಕಲವ್ಯ ಮಾಡೆಲ್ ಡೆಸಿಡೆನ್ಶಿಯಲ್ ಸ್ಕೂಲ್ ಗಳನ್ನು ಸ್ಥಾಪನೆ ಮಾಡಲಿದೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ತಿಳಿಸಿದ್ದಾರೆ. ಬುಡಕಟ್ಟು ಜನರ ಉದ್ಧಾರಕ್ಕಾಗಿ ಸಚಿವಾಲಯ ಯೋಜಿಸಿರುವ 100 ದಿನಗಳ ಟಾರ್ಗೆಟ್ ಗಳಲ್ಲಿ ಇದು ಕೂಡ ಒಂದು ಎಂದಿದ್ದಾರೆ.
ನವದೆಹಲಿಯಲ್ಲಿ ನೇರ ಲಾಭ ವರ್ಗಾವಣೆ-ಡಿಬಿಟಿ ಸ್ಕಾಲರ್ಶಿಪ್ ಪೋರ್ಟಲ್ ಮತ್ತು ಎನ್ಜಿಓ ಗ್ರ್ಯಾಂಟ್ಸ್ ಪೋರ್ಟಲ್ ಅನ್ನು ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜನಾಂಗದ ಜನರ ಏಳಿಗೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವಂತೆ ಅವರು ರಾಜ್ಯ ಬುಡಕಟ್ಟು ಸಚಿವಾಲಯ ಮತ್ತು ಕೇಂದ್ರದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
ಡಿಬಿಟಿ ಪೋರ್ಟಲ್ ಅಡಿಯಲ್ಲಿ ಹಣಕಾಸು ನೆರವು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗಲಿದೆ. ಈ ಸ್ಕಾಲರ್ಶಿಪ್ ಮೆಟ್ರಿಕ್ ಪೂರ್ವ, ಮೆಟ್ರಿಕ್ ಬಳಿಕ ಮತ್ತು ಉನ್ನತ ತರಗತಿಗಳಿಗೆ ರಾಷ್ಟ್ರೀಯ ಸ್ಕಾಲರ್ಶಿಪ್ ಅನ್ನು ಒಳಗೊಂಡಿದೆ.
ಇದರಡಿಯಲ್ಲಿ, ಫಲಾನುಭವಿಗಳ ಸಂಖ್ಯೆ ಮತ್ತು ಅವರಿಗೆ ಕೊಡಲಾದ ಸ್ಕಾಲರ್ಶಿಪ್ ಗಳನ್ನು ಪತ್ತೆ ಮಾಡುವುದು ಸಾಧ್ಯ, ಹಣಕಾಸಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಈ ಪೋರ್ಟಲ್ ನಿವಾರಿಸಲಿದೆ. ಎನ್ ಜಿಓಗಳು ಇಲ್ಲಿ ಫಂಡ್ ಗಳಿಗಾಗಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.