ನವದೆಹಲಿ: ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ಭಯೋತ್ಪಾದಕ ಮತ್ತು ಪುಲ್ವಾಮದ ಲೇತ್ಪೊರ ದಾಳಿಯ ಹಿಂದಿನ ರೂವಾರಿಗಳಲ್ಲಿ ಒಬ್ಬನಾಗಿರುವ ಉಗ್ರನೊಬ್ಬನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭಾರತಕ್ಕೆ ಗಡಿಪಾರು ಮಾಡಿದೆ. ಈ ಬೆಳವಣಿಗೆ ಭಾರತಕ್ಕೆ ದೊರೆತ ಮಹತ್ವದ ರಾಜತಾಂತ್ರಿಕ ಗೆಲುವು ಎಂದೇ ಬಣ್ಣಿಸಲಾಗುತ್ತಿದೆ.
ಪುಲ್ವಾಮ ಲೇತ್ಪೊರ CRPF ಕ್ಯಾಂಪ್ ಮೇಲೆ ನಡೆದ ದಾಳಿಯಲ್ಲಿ ಭಾರತಕ್ಕೆ ಅತ್ಯಂತ ಬೇಕಾದ ಉಗ್ರನಾಗಿದ್ದ ನಿಸಾರ್ ಅಹ್ಮದ್ ತಾಂತ್ರೆ ಎಂಬಾತನನ್ನು ಯುಎಇ ಭಾರತಕ್ಕೆ ಗಡಿಪಾರು ಮಾಡಿದೆ ಎಂಬುದನ್ನು ರಾಷ್ಟ್ರೀಯ ತನಿಖಾ ದಳ (NIA) ಇಂದು ಸ್ಪಷ್ಟಮಾಡಿದೆ.
ಮಾರ್ಚ್ 31ರಂದು ಯುಎಇ ಈತನನ್ನು ಗಡಿಪಾರು ಮಾಡುವ ನಿರ್ಧಾರವನ್ನು ಭಾರತದ ಮನವಿಯ ಮೇರೆಗೆ ತೆಗೆದುಕೊಂಡಿತ್ತು, ಇದೀಗ ಆತನನ್ನು ಭಾರತಕ್ಕೆ ಕಳುಹಿಸಿಕೊಟ್ಟಿದೆ.
ಪುಲ್ವಾಮ ಲೇತ್ಪೊರ CRPF ಕ್ಯಾಂಪ್ ಮೇಲೆ 2017ರಲ್ಲಿ ನಡೆದ ದಾಳಿಯಲ್ಲಿ ಐದು ಮಂದಿ ಯೋಧರು ಹುತಾತ್ಮರಾಗಿದ್ದರು. 2018ರ ಫಬ್ರವರಿಯಲ್ಲಿ ಈ ದಾಳಿಯ ರುವಾರಿ ತಾಂತ್ರೆಯ ಯುಎಇಗೆ ಪರಾರಿಯಾಗಿದ್ದ. ಅಲ್ಲಿ ಆತನ ಬಂಧನವಾಗಿತ್ತು. ಇದೀಗ ಆತನನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ.
ಇದೀಗ ಈ ದಾಳಿಯ ರುವಾರಿಯನ್ನು ಭಾರತಕ್ಕೆ ಯುಎಇ ಹಸ್ತಾಂತರ ಮಾಡುತ್ತಿದೆ. ಇದು ಭಾರತಕ್ಕೆ ದೊರೆತ ಅತೀದೊಡ್ಡ ರಾಜತಾಂತ್ರಿಕ ಗೆಲುವಾಗಿದೆ. ಮಾತ್ರವಲ್ಲ ಯುಎಇಯೊಂದಿಗಿನ ಭದ್ರತಾ ಸಹಕಾರವನ್ನೂ ವೃದ್ಧಿಗೊಳ್ಳುವಲ್ಲಿ ಮಹತ್ವದ ಪಾತ್ರವನ್ನು ಇದು ವಹಿಸಲಿದೆ.
ನಿಸಾರ್, ನೂರ್ ಮೊಹಮ್ಮದ್ ತಾಂತ್ರೆಯ ಎಂಬ ಉಗ್ರನ ಸಹೋದರನಾಗಿದ್ದಾನೆ. ಈ ಉಗ್ರನನ್ನು ದೆಹಲಿ ನ್ಯಾಯಾಲಯ ‘ಸಾವಿನ ವ್ಯಾಪಾರಿ’ ಎಂದು ಘೋಷಿಸಿತ್ತು. ಲೇತ್ಪೊರ ದಾಳಿಯ ಕೆಲ ದಿನಗಳ ಹಿಂದೆಯಷ್ಟೇ ಆತನನ್ನು ಎನ್ಕೌಂಟರ್ ಮಾಡಿ ಹತ್ಯೆ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.