ನವದೆಹಲಿ: ಕಲ್ಲಿದ್ದಲು ಯಾವಾಗಲೂ ಭಾರತದಲ್ಲಿ ಶಕ್ತಿಯ ಪ್ರಾಥಮಿಕ ಮೂಲವೆಂದು ಗುರುತಿಸಲ್ಪಡಲಾಗುತ್ತದೆ, ಶೇ. 55% ವಿದ್ಯುತ್ ಉತ್ಪಾದನೆಗೆ ಇದು ಮೂಲವಾಗಿದೆ. ಆದರೆ, ನರೇಂದ್ರ ಮೋದಿ ಸರಕಾರದ ನೀತಿಯ ಫಲವಾಗಿ, ಕಪ್ಪು ವಜ್ರದ ಉದ್ಯಮವು ಈಗ ಆರು ಕಲ್ಲಿದ್ದಲು ರಾಜ್ಯಗಳ 498 ಗ್ರಾಮಗಳಲ್ಲಿ ಸುಮಾರು ಏಳು ಲಕ್ಷ ಫಲಾನುಭವಿಗಳ ಬಾಯಾರಿಕೆಯನ್ನು ತಣಿಸುತ್ತಿದೆ.
ಕಲ್ಲಿದ್ದಲು ಸಚಿವಾಲಯದ ಮಾಹಿತಿಯ ಪ್ರಕಾರ, ಪ್ರತಿ ದಿನಕ್ಕೆ 6,100 ಲಕ್ಷ ಕ್ಯೂಬಿಕ್ ಮೀಟರ್ ಅಥವಾ 16,700 ಲೀಟರ್ಗಳಷ್ಟು ನೀರನ್ನು ಭಾರತದ ಅತಿ ದೊಡ್ಡ ಕಲ್ಲಿದ್ದಲು ನಿರ್ಮಾಪಕ ಕೋಲ್ ಇಂಡಿಯಾ ಗಣಿಗಳಿಂದ ಪಂಪ್ ಮಾಡಲಾಗುತ್ತಿದೆ.
ಕೆಲವು ವರ್ಷಗಳ ಹಿಂದೆ, ಕಲ್ಲಿದ್ದಲು ಗಣಿಗಳು ಈ ನೀರಿನ ಸಣ್ಣ ಭಾಗವನ್ನು ಚಿಮುಕಿಸುವಿಕೆ ಮತ್ತು ಕಲ್ಲಿದ್ದಲು ತೊಳೆಯುವಿಕೆಗಾಗಿ ಬಳಸಿಕೊಳ್ಳುತ್ತಿದ್ದವು. ಉಳಿಯುವ ನೀರನ್ನು ಗಣಿ ಪ್ರದೇಶಗಳಲ್ಲಿ ನಿರ್ಮಿಸಿದ ಕೊಳಗಳಲ್ಲಿ ಸಂಗ್ರಹಿಸಲಾಗುತ್ತಿತ್ತು ಮತ್ತು ಉಳಿದವು ನೆರೆಯ ಭೂಮಿಗೆ ಪಂಪ್ ಮಾಡಲ್ಪಡುತ್ತಿದ್ದವು.
2015-16ರ ನಂತರ ಸನ್ನಿವೇಶ ಬದಲಾಗುತ್ತಾ ಬಂತು, ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ಅವರು ನೀರನ್ನು ಉತ್ತಮ ಕಾರ್ಯಕ್ಕೆ ಬಳಸುವಂತೆ ಗಣಿಗಾರರಿಗೆ ಸೂಚನೆಯನ್ನು ನೀಡಿದರು. ‘ಕೋಲ್ ನೀರ್’ ಬ್ರ್ಯಾಂಡಿನ ಅಡಿಯಲ್ಲಿ ಪ್ಯಾಕ್ಡ್ ಕುಡಿಯುವ ನೀರನ್ನು ಮೊದಲ ಹೆಜ್ಜೆಯಾಗಿ ಆರಂಭಿಸಲಾಯಿತು, ಈ ಕ್ರಮವು ನಾಗರಿಕ ಸೇವೆಯಾಗಿ ಬೆಳೆದುಕೊಂಡು ಬಂದಿದೆ. ಸಿಎಲ್ಐ ಗಣಿಗಳು ದೇಶೀಯ ಬಳಕೆಗಾಗಿ 484 ಲಕ್ಷ ಕ್ಯೂಬಿಕ್ ಮೀಟರ್ ನೀರು ಮತ್ತು 2,060 ಹೆಕ್ಟೇರ್ ಭೂಮಿ ನೀರಾವರಿಗಾಗಿ 599 ಲಕ್ಷ ಕ್ಯೂಬಿಕ್ ಮೀಟರ್ ನೀರನ್ನು ಸರಬರಾಜು ಮಾಡುತ್ತಿವೆ ಎಂಬುದನ್ನು ಕಲ್ಲಿದ್ದಲು ಸಚಿವಾಲಯ ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.