ನವದೆಹಲಿ: ದೇಶವೇ ಹೋಳಿಯ ಸಂಭ್ರಮದಲ್ಲಿದೆ. ನಾಳೆ ದೇಶದಾದ್ಯಂತ ಬಣ್ಣಗಳ ಹಬ್ಬ ಹೋಳಿ, ಇದನ್ನು ಅತ್ಯಂತ ಉಲ್ಲಾಸ ಉತ್ಸಾಹದಿಂದ ಆಚರಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಜನರು ಈಗಾಗಲೇ ಮಾಡಿಕೊಂಡಿದ್ದಾರೆ. ಆದರೆ ದೇಶ ಕಾಯುವ ಸಿಆರ್ಪಿಎಫ್ ಯೋಧರು ಈ ಬಾರಿ ಬಣ್ಣಗಳ ಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ. ಇದಕ್ಕೆ ಕಾರಣ ಫೆ.14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿ.
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್ಪಿಎಫ್ ಯೋಧರ ಗೌರವಾರ್ಥ ಈ ಬಾರಿ ಹೋಳಿಯನ್ನು ಅಧಿಕೃತವಾಗಿ ಆಚರಣೆ ಮಾಡದಿರಲು ಸಿಆರ್ಪಿಎಫ್ ನಿರ್ಧರಿಸಿದೆ. ಪ್ರತಿ ವರ್ಷ ಈ ಪಡೆ ಹೋಳಿಯನ್ನು ಆಚರಿಸುತ್ತಾ ಬಂದಿದೆ.
ಗೋರೆಗಾಂವ್ನಲ್ಲಿ ನಡೆದ ಸಿಆರ್ಪಿಎಫ್ನ 80ನೇ ರೈಸಿಂಗ್ ಡೇ ಸಮಾರಂಭದಲ್ಲಿ, ಸಿಆರ್ಪಿಎಫ್ ಡೈರೆಕ್ಟರ್ ಜನರಲ್ ಆರ್ಆರ್ ಭಟ್ನಾಗರ್ ಅವರು ಮಾರ್ಚ್ 21ರಂದು ಹುತಾತ್ಮ ಯೋಧರ ಗೌರವಾರ್ಥ ಅಧಿಕೃತವಾಗಿ ಹೋಳಿ ಆಚರಿಸುತ್ತಿಲ್ಲ ಎಂದು ಘೋಷಣೆ ಮಾಡಿದ್ದಾರೆ.
‘ಎಡಪಂಥೀಯ ತೀವ್ರವಾದಿಗಳು ದೇಶದಲ್ಲಿ ಶೇ.40ರಷ್ಟಕ್ಕೆ ಕುಸಿದಿದ್ದಾರೆ. ಕೆಲವು ಭಾಗಗಳಲ್ಲಿ ಮಾತ್ರ ಅವರ ಉಪಟಳ ಇದೆ’ ಎಂದಿದ್ದಾರೆ.
‘ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕುವುದು ಅತೀದೊಡ್ಡ ಸವಾಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಕಳೆದ ವರ್ಷ 210 ಉಗ್ರರನ್ನು ಹತ್ಯೆ ಮಾಡಲಾಗಿದೆ’ ಎಂದರು.
‘ಸಿಆರ್ಪಿಎಫ್ ಅತ್ಯುತ್ತಮ ಯುದ್ಧ ಕಾರ್ಯಾಚರಣೆಗಾಗಿ, ಗ್ರೌಂಡ್ ಪೆನರ್ರೇಟಿಂಗ್ ರಾಡರ್, ಲಘು ಬುಲೆಟ್ ಪ್ರೂಫ್ ಜಾಕೆಟ್, ಮಾನವರಹಿತ ಏರಿಯಲ್ ವೆಹ್ಹಿಕಲ್ಸ್ , ರೈಫಲ್ಸ್ ಮತ್ತು ಸಿಗ್ನಲ್ ಜ್ಯಾಮರ್ಗಳು, ಶಸ್ತ್ರಾಸ್ತ್ರಗಳು, ಗನ್ ಶಾಟ್ ಲೊಕೇಟರ್ಗಳು ಸೇರಿಂದಂತೆ ಅತ್ಯಾಧುನಿಕ ಪರಿಕರಗಳನ್ನು ನಿಯೋಜನೆ ಮಾಡಿಕೊಳ್ಳುತ್ತಿದೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.